ಗ್ಲುಕೋಮಾ ಜಾಗೃತಿಗಾಗಿ ಮಿರಜ್ನ ಶಾಂತಿಸರೋಜ ನೇತ್ರಾಲಯದ ವತಿಯಿಂದ ಮಿನಿ ಮ್ಯಾರಥಾನ್
Mini marathon organized by Shantisaroja Eye Hospital, Miraj for glaucoma awareness
ಲೋಕದರ್ಶನ ವರದಿ
ಗ್ಲುಕೋಮಾ ಜಾಗೃತಿಗಾಗಿ ಮಿರಜ್ನ ಶಾಂತಿಸರೋಜ ನೇತ್ರಾಲಯದ ವತಿಯಿಂದ ಮಿನಿ ಮ್ಯಾರಥಾನ್
ಕಾಗವಾಡ, 19; ಗ್ಲುಕೋಮಾ ನಮಗೆ ಗೊತ್ತಲಿದೆ ಆವರಸಿ, ನಮ್ಮನ್ನು ಕುರಡರನ್ನಾಗಿಸಬಹುದು. ಆದ್ದರಿಂದ ಪ್ರತಿಯೊಬ್ಬರು ನಿಯಮಿತವಾಗಿ ಕಣ್ಣಿನ ತಪಾಸನೆ ಮಾಡಿಸಿಕೊಂಡು, ಗ್ಲುಕೋಮಾದಿಂದ ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಬಹುದಾಗಿದೆಂದು ಮಿರಜ್ನ ಶಾಂತಿ ಸರೋಜ ನೇತ್ರಾಲಯದ ಡಾ. ಪೂಜಾ ಭೋಮಾಜ್ ತಿಳಿಸಿದ್ದಾರೆ.
ಅವರು, ಇತ್ತಿಚಿಗೆ ಮಹಾರಾಷ್ಟ್ರದ ಮಿರಜ್ ಪಟ್ಟಣದ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ವಿಶ್ವ ಗ್ಲುಕೋಮಾ ಸಪ್ತಾಹದ ನಿಮಿತ್ತವಾಗಿ ಗ್ಲುಕೋಮಾ ಜಾಗೃತಿಗಾಗಿ ಮಿನಿ ಮ್ಯಾರಥಾನ್ಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು.
ವಿಧಾನ ಪರಿಷತ್ ಸದಸ್ಯ ಇದ್ರಸ್ಭಾಯಿ ನಾಯಕವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮ್ಯಾರಾಥಾನ್ಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿ, ಮಾತನಾಡುತ್ತ ಶಾಂತಿ ಸರೋಜ ನೇತ್ರಾಲಯದ ಸಾಮಾಜಿಕ ಮತ್ತು ಆರೋಗ್ಯ ಕಾಳಜಿ ಶ್ಲಾಘನೀಯವಾಗಿದೆ ಎಂದರು. ಹೃದ್ರೋಗ ತಜ್ಞ ಡಾ. ರಿಯಾಜ್ ಮುಜಾವರ್ ಉಪಸ್ಥಿತರಿದ್ದರು.
ಶಾಂತಿ ಸರೋಜ್ ನೇತ್ರಾಯಲದ ನೇತ್ರತಜ್ಞ ಡಾ. ಶರದ ಭೋಮಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬದ ಸದಸ್ಯರಲ್ಲಿ ಗ್ಲುಕೋಮಾ ಹಿನ್ನಲೆಯಿದ್ದವರು, 40 ವರ್ಷಕ್ಕಿಂತ ಮೇಲ್ಪಟ್ಟವರು, ಮಧುಮೇಹ ಇರುವವರು, ದೀರ್ಘ ಕಾಲದಿಂದ ಸ್ಟೀರಾಯ್ಡ್ಗ ಬಳಿಸಿದವರು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಂಡವರು ಕಣ್ಣುಗಳ ತಪಾಸನೆ ಮಾಡಿಸಿಕೊಂಡು, ಗ್ಲುಕೋಮಾದಿಂದ ರಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಜೊತೆಗೆ ಮುಂದೆಯೂ ಇಂತಹ ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆ ನೀಡಿದರು.
ಈ ಮಿನಿ ಮ್ಯಾರಥಾನ್ ನಲ್ಲಿ 150 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಹಿರಿಯ ನಾಗರೀಕರು ಸಹ ಉತ್ಸಾಹದೊಂದಿಗೆ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 