ಕಾಶ್ಮೀರ ಕಣಿವೆಯಲ್ಲಿ ಉಗ್ರರ ಸಂಖ್ಯೆ ಇಳಿಮುಖ: ವರದಿ
ಶ್ರೀನಗರ, ಫೆ 10 ,ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಪಡಿಸಿದ ನಂತರ ಕಣಿವೆಯಲ್ಲಿ ಉಗ್ರ ಸಂಘಟನೆಗೆ ಸೇರುವ ಯುವಕರ ಸಂಖ್ಯೆ ಗಣನೀಯ ಇಳಿಮುಖವಾಗಿದೆ.ಭದ್ರತಾ ಪಡೆಗಳು ತಯಾರಿಸಿರುವ ವರದಿಯಲ್ಲಿ ಈ ಹೊಸ ಅಂಶ ಉಲ್ಲೇಖ ಮಾಡಲಾಗಿದೆ.ಕಳೆದ ಆಗಸ್ಟ್ನಿಂದ ಈ ವರೆಗೆ ಪ್ರತಿ ತಿಂಗಳು 5 ಯುವಕರು ಮಾತ್ರ ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದಾರೆ. ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ ಎಂದೂ ವರದಿಯಲ್ಲಿ ಹೇಳಿದೆ. ಇದಕ್ಕೂ ಮುನ್ನ ಪ್ರತಿ ತಿಂಗಳು ಸರಾಸರಿ 14 ಯುವಕರು ಸೇರುತ್ತಿದ್ದರು. ಆಗಸ್ಟ್ 5ಕ್ಕೂ ಮುನ್ನ ಉಗ್ರಗಾಮಿಯೊಬ್ಬ ಹತ್ಯೆಯಾದ ತಕ್ಷಣ ಆತನ ಅಂತ್ಯಕ್ರಿಯೆಗಾಗಿ ಜನ ಸೇರುತ್ತಿದ್ದರು. ಈ ವೇಳೆಯೇ ಯುವಕರು ಹೆಚ್ಚಾಗಿ ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದರು. ಆದರೆ ಆಗಸ್ಟ್ 5ರ ಕೇಂದ್ರದ ನಿರ್ಬಂಧದ ನಂತರ ಇದು ಇಳಿಮುಖವಾಗಿದೆ ಎಂದೂ ವರದಿ ಹೇಳಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 