ನಾಗೇನಹಳ್ಳಿ ನೂತನ ದೇವಸ್ಥಾನದಲ್ಲಿ ಮಂಡಲ ಪೂಜೆ ಹಾಗೂ ದಸರ ಉತ್ಸವ

ನಾಗೇನಹಳ್ಳಿ ನೂತನ ದೇವಸ್ಥಾನದಲ್ಲಿ ಮಂಡಲ ಪೂಜೆ ಹಾಗೂ ದಸರ ಉತ್ಸವ Mandala Puja and Dasara festival at the new temple in Nagenahalli

ಬಳ್ಳಾರಿ 25 : ತಾಲೂಕಿನ ಮೋಕಾ ವ್ಯಾಪ್ತಿಯಲ್ಲಿನ ಗೊಲ್ಲ ನಾಗೇನಹಳ್ಳಿ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿದ್ದ ಅಭಯ ಅಂಜೀನೆಯ ಸ್ವಾಮಿ ಹಾಗೂ ಬನ್ನಿಮಹಾಂಕಾಳಿ ದೇವಿ ದೇವಸ್ಥಾನ ಕಳೆದ ತಿಂಗಳು ಅದ್ದೂರಿಯಾಗಿ ಉದ್ಘಾಟನೆ ಗೊಂಡಿದ್ದು 48 ದಿನಗಳಿಂದ ಮಂಡಲ ಪೂಜೆ ಕಾರ್ಯಕ್ರಮ ಜರುಗಿದವು.  

ಅಭಯ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ ಹೋಮ ಹವನ ತದ ನಂತರ ಮಹಾ ಮಂಗಳಾರತಿ ಅನ್ನ ಪ್ರಸಾದ ವಿನಿಯೋಗ ನಡೆಸಲಾಯಿತು.ನವರಾತ್ರಿ ಹಬ್ಬ ದಸರಾ ಪ್ರಯುಕ್ತ ತಾಯಿ ಬನ್ನಿ ಮಹಾಕಾಳಿ ದೇವಿತೆ 9 ದಿನಗಳ ಕಾಲ ವಿಷೇಶ ಪೂಜೆ ಭಜನೆ, ಡೊಳ್ಳು ಕುಣಿತಗಳು ವಿರಗಾಸೆ ಪ್ರದರ್ಶಗಳು ಜರುಗಿದವು ಎಂದು ಗ್ರಾಮದ ಶ್ರೀ ವಿರೂಪಾಕ್ಷಪ್ಪ ಕುಂಬಾರ್ ವಾಸ್ತು ತಜ್ಞರು ಲೋಕ ದರ್ಶನ ಪತ್ರಿಕೆಗೆ ತಿಳಿಸಿದರು.