ಜಿಲ್ಲೆಯ 22 ಸಾವಿರ ಹೆಕ್ಟೇರ್ನಲ್ಲಿ ಮನರೇಗಾ ನೆರವಿನ ಜಲಾಮೃತ ಜಲಾನಯನ ಕಾಮಗಾರಿ

ಹಾವೇರಿ: ಮೇ 12: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ  ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಜಿಲ್ಲೆಯಲ್ಲಿ ಜಲಾಮೃತ ಜಲಾನಯನ ಯೋಜನೆಯಡಿ ಜಿಲ್ಲೆಯಲ್ಲಿ 22,082 ಹೆಕ್ಟೇರ್ ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಚಟುವಟಿಕೆ ಮೂಲಕ ಜಲಸಂಪನ್ಮೂಲ ಕ್ರೊಢೀಕರಣ ಕಾರ್ಯ ಕೈಗೊಂಡಿದೆ.

        ಜಲಾಮೃತ ಜಲಾನಯನ ಯೋಜನೆಯಡಿ ಪ್ರಮುಖವಾಗಿ ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಾದ ಮಣ್ಣಿನ ಬದು, ಕೃಷಿ ಹೊಂಡ, ನೀರು ಕಾಲುವೆ, ಕೊಳವೆಬಾವಿ ಪುನರಜ್ಜೀವನ, ಕೃಷಿ ಅರಣ್ಯ, ತೋಟಗಾರಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಂಡಿದೆ.

ಇದೀಗ ರಾಣೇಬೆನ್ನೂರು ತಾಲ್ಲೂಕಿನಲ್ಲಿ 2710 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಈ ಭಾಗದ ಮೈದೂರು ಉಪಜಲಾನಯನ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಚಿಕ್ಕ ಅರಳಿಹಳ್ಳಿ, ಬೇವಿನಹಳ್ಳಿ, ಗುಡಗೂರ, ಮೈದೂರು, ಕುದರಿಹಾಳ, ಹರನಗಿರಿ, ಯತ್ತಿನಹಳ್ಳಿ ಹೊನ್ನತ್ತಿ, ಕೆರಿಮಲ್ಲಾಪೂರ ಒಂಭತ್ತು ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 153ಕ್ಕೂ ಹೆಚ್ಚು ಜನ ಕೂಲಿಕಾಮರ್ಿಕರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು  ಜಂಟಿ ಕೃಷಿ ನಿದರ್ೇಶಕರಾದ ಬಿ. ಮಂಜುನಾಥ ಅವರು ತಿಳಿಸಿದ್ದಾರೆ.

         ಮೈದೂರ ಜಲಾನಯನ ಪ್ರದೇಶದಲ್ಲಿ 2234 ಹೆಕ್ಟೇರ್ ಕಂದಕ ಬದು ನಿಮರ್ಾಣ ಕಾರ್ಯ, 518 ಕಲ್ಲಿನ ಕೋಡಿ, 30 ರಬ್ಬಲ್ ತಡೆ, 121 ಕೃಷಿ ಹೊಂಡ, 78 ಎರೆಹುಳ ತೊಟ್ಟಿ, 26 ಆರ್ ಆರ್ ಎಸ್, 17 ತಡೆ ಆಣೆಕಟ್ಟು, 489 ಹೆ ಪ್ರದೇಶದಲ್ಲಿ ತೋಟಗಾರಿಕೆ, 1203 ಹೆ ಪ್ರದೇಶದಲ್ಲಿ ಅರಣೀಕರಣ, 50 ಹೆಕ್ಟೇರ್ ಪ್ರದೇಶದಲ್ಲಿ ಮೇವು ಅಭಿವೃದ್ಧಿ, 118 ಇಂಗು ಗುಂಡಿ, 18 ದನದ ಕೊಟ್ಟಿಗೆ, 18 ಕುರಿ ಕೊಟ್ಟಿಗೆ ಕಾಮಗಾರಿಗಳ  ನಿಮರ್ಾಣದ ಉದ್ದೇಶ ಹೊಂದಲಾಗಿದೆ.

            ಈ ಪೈಕಿ 125 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಕಂದಕ ಬದು ನಿಮರ್ಾಣ ಮಾಡಲಾಗಿದೆ. ನಿತ್ಯ  ಈ ಉಪಜಲಾನಯನ ವ್ಯಾಪ್ತಿಯಲ್ಲಿ 250 ರಿಂದ 300 ಜನ ಕಾಮರ್ಿಕರಿಗೆ ಕೆಲಸ ನೀಡಲಾಗಿದೆ. ಕೂಲಿಕಾರರಿಗೆ  ಕೋವಿಡ್  ಸುರಕ್ಷತಾ ಕ್ರಮಗಳ ಕುರಿತು ಜಾಗೃತಿಯ ಜೊತೆಗೆ ಮುಖಗವಸು ಧರಿಸಿ ಸಾಮಾಜಿಕ ಅಂತರ ಕಾಯ್ದಕೊಳ್ಳುವ ಮೂಲಕ ಕೆಲಸ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.  

        ವಿಶೇಷವೆಂದರೆ ಕೋವಿಡ್ ಸಂಕಷ್ಟ ಕಾಲದಲ್ಲಿ ಪಟ್ಟಣ, ನಗರ ಬಿಟ್ಟು ಸ್ವ ಗ್ರಾಮಕ್ಕೆ ಹಿಂದಿರುಗಿದವರು ನರೇಗಾ ಕೂಲಿಗಳಾಗಿ ಕೆಲಸಮಾಡುತ್ತಿದ್ದಾರೆ. ವಿದ್ಯಾವಂತರು ಯಾವುದೇ ಮುಜಗರ ಇಲ್ಲದೆ ಉದ್ಯೋಗ ಖಾತ್ರಿಯಲ್ಲಿ ಕೂಲಿಕಾರರಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ವಾಭಿಮಾನ ಬದುಕಿಗೆ ಮುಂದಾಗಿದ್ದಾರೆ. 

      ಬಿ.ಎಡ್. ಪದವೀಧರೆ ಕುಮಾರಿ ಲಾಲವ್ವ ಲಮಾಣಿ  ಉದ್ಯೋಗಖಾತ್ರಿ ಜಲಾಮೃತ ಜಲಾನಯನ ಕಾಮಗಾರಿ ಕೆಲಸದಲ್ಲಿ ಕೂಲಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಯುವತಿ ಲಾಲವ್ವ ಲಮಾಣಿ ಅವರು ಹೇಳುವಂತೆ ಮನೆಯಲ್ಲಿ ಕಷ್ಟ ಇದೆ, ಕೊರೊನಾ ಸಂಕಷ್ಟದಿಂದ ಬೇರೆಡೆ ಕೆಲಸಮಾಡಲು ಸಾಧ್ಯವಾಗುತ್ತಿಲ್ಲ. ಸ್ವಾಭಿಮಾನದಿಂದ ದುಡಿಯಲು ಕೂಲಿ ಕೆಲಸ ತಪ್ಪಲ್ಲ. ಈ ಕಾರಣದಿಂದ ಉದ್ಯೋಗ ಖಾತ್ರಿ ಕೂಲಿಕಾರಳಾಗಿ ಕೆಲಸ ಮಾಡುತ್ತಿದ್ದೇನೆ. 

   ಇದರಿಂದ ನನ್ನ ಕುಟುಂಬದ ಜೀವನ ಸರಳವಾಗಿದೆ. ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಶಿಕ್ಷಕಳಾಗಿ ಕೆಲಸ ಮಾಡಲು ಸಿದ್ಧ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಷ್ಟಗಳ ನಿರ್ವಹಣೆಗೆ ಉದ್ಯೋಗ ಖಾತ್ರಿ ಕೆಲಸ ಆಸರೆಯಾಗಿದೆ ಎಂದು ಅಭಿಮಾನದಿಂದ ತಿಳಿಸಿದರು. 

     ಯೋಜನೆ ಕುರಿತಂತೆ ಸ್ಥಳೀಯ ರೈತರಿಗೆ ಖುಷಿತಂದಿದೆ. ನರೇಗಾ ನೆರವಿನಲ್ಲಿ ಜಲಾಮೃತ ಜಲಾನಯನ ಕಾಮಗಾರಿಗಳು ಅತ್ಯಂತ ಉಪಯುಕ್ತವಾಗಿದ್ದು, ಅಂತರ್ಜಲ ಸಂರಕ್ಷಣೆ, ಪರಿಸರ ರಕ್ಷಣೆಗೆ ಅತ್ಯಂತ ಉಪಯುಕ್ತವಗಿದೆ. ಇದರಿಂದ ರೈತರಿಗೂ ಲಾಭವಾಗಿದೆ. ಎರಡು ದಿನದ ಮಳೆಯಿಂದ ಭೂಮಿಯಲ್ಲಿ ನೀರು ಇಂಗಲು ಅನುಕೂಲವಾಗಿದೆ ಎಂದು ಇಲ್ಲಿನ ರೈತರು ಸಂತಸ ಹಂಚಿಕೊಳ್ಳುತ್ತಾರೆ.

ಜಿಲ್ಲೆಯ ಮಾಹಿತಿ: 

        ಹಾವೇರಿ ತಾಲ್ಲೂಕಿನಲ್ಲಿ 4849.07 ಹೆಕ್ಟೇರ್ ಪ್ರದೇಶದ ಜಲಾಯನಯನ ಚಟುವಟಿಕೆ ನಡೆಯುತ್ತಿದೆ. ದೇವಿಹೊಸೂರು ಉಪಜಲಾನಯನ ವ್ಯಾಪ್ತಿಯಲ್ಲಿ ಆಲದಕಟ್ಟಿ, ನಾಗಣೂರು, ದೇವಿಹೊಸೂರು, ಹೊಸಳ್ಳಿ ಹಾಗೂ ವೆಂಕಟಾಪುರ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 

     ಸವಣೂರು ತಾಲ್ಲೂಕಿನಲ್ಲಿ 3020.27 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಕಳಸೂರು ಉಪಜಲಾನಯನ ವ್ಯಾಪ್ತಿಯಲ್ಲಿ ಕಳಸೂರು ಹಾಗೂ ಹತ್ತಿಮತ್ತೂರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 

       ಶಿಗ್ಗಾಂವ ತಾಲ್ಲೂಕಿನಲ್ಲಿ 2900.35 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಬಂಕಾಪೂರ ಉಪಜಲಾನಯನ ವ್ಯಾಪ್ತಿಯಲ್ಲಿ ನಿರಲಕಟ್ಟಿ, ಬಿಸಲಹಳ್ಳಿ, ಮುನವಳ್ಳಿ, ಕುರಸಾಪುರ, ನಾರಾಯಣಪುರ ಹಾಗೂ ಕಲ್ಯಾಣ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

       ಬ್ಯಾಡಗಿ ತಾಲ್ಲೂಕಿನಲ್ಲಿ 2850.36 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಹೆಡಿಗೊಂಡ ಉಪಜಲಾನಯನ ವ್ಯಾಪ್ತಿಯಲ್ಲಿ ಚಿನ್ನಿಕಟ್ಟಿ, ತಿಪ್ಪಲಾಪುರ, ನಾಗಾಪುರ, ಹೆಡಿಗೊಂಡ, ಬಡಮಲ್ಲಿ ಹಾಗೂ ದಾಸನಕೊಪ್ಪ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

    ಹಾನಗಲ್ ತಾಲ್ಲೂಕಿನಲ್ಲಿ 2765.36 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಉಪ್ಪಣಸಿ ಉಪಜಲಾನಯನ ವ್ಯಾಪ್ತಿಯಲ್ಲಿ ಚಿನ್ನಿಕಟ್ಟಿ, ತಿಪ್ಪಲಾಪುರ, ನಾಗಾಪುರ, ಹೆಡಿಗೊಂಡ, ಬಡಮಲ್ಲಿ ಹಾಗೂ ದಾಸನಕೊಪ್ಪ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

         ಹಿರೇಕೆರೂರು ತಾಲ್ಲೂಕಿನಲ್ಲಿ 2986.49 ಹೆಕ್ಟೇರ್ ಪ್ರದೇಶದ ಚಟುವಟಿಕೆ ನಡೆಯುತ್ತಿದೆ. ಅಣಜಿ ಉಪಜಲಾನಯನ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ನಾಗವಂದ, ತಡಕನಹಳ್ಳಿ, ಅಣಜಿ ಹಾಗೂ ಇಸ್ರಾಮಪುರ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ.

 ಸಾಧನೆ: ಜಿಲ್ಲೆಯ ಏಳು ತಾಲೂಕುಗಳಲ್ಲಿ  7017 ಮಾನವ ದಿನಗಳನ್ನು ಸೃಜಿಸಿ 226 ಕಾಮಗಾರಿ ಕೈಗೊಳ್ಳಲಾಗಿದ್ದು, 493 ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು ನಿಮರ್ಾಣ ಕೈಗೊಳ್ಳಲಾಗಿದೆ ಹಾಗೂ 2393 ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿವೆ.