ಗೃಹ ರಕ್ಷಕದಳ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ


ಲೋಕದರ್ಶನ ವರದಿ 

ಕಂಪ್ಲಿ 06: ಸ್ಥಳೀಯ ಗೃಹ ರಕ್ಷಕದಳ ಕಚೇರಿಯ ಆವರಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳ ಜಯಂತಿಯನ್ನು ಸರಳವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಗೃಹ ರಕ್ಷಕದಳ ಪ್ರಭಾರಿ ಘಟಕಾಧಿಕಾರಿ.ಕೆ.ಹೂನ್ನುರವಲಿ ಸಾಬ್  ಮಾತನಾಡಿ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳಿಂದ ಮಾತ್ರ ಶಾಂತಿಯುತ ಜೀವನ ಸಾಗಿಸಲು ಸಾಧ್ಯ ಮಕ್ಕಳಲ್ಲಿ ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಪ್ರೇರೇಪಿಸಬೇಕು ಎಂದು ಹೇಳಿದರು.  

ಪಿ.ಎಲ್‌.ಸಿ.ಗಳಾದ ಹೆಚ್ ಗಿರಿಧರ ಲೀಡರ್ ಗಳಾದ ಕೆ.ಸುರೇಶ ಕೆ.ಜಗದೀಶ ಬಿ.ಚಂದ್ರಶೇಖರ್ ಗೃಹ ರಕ್ಷಕದಳ ಸದಸ್ಯ ಕರಿಬಸಪ್ಪ ಕಚೇರಿಯ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳಿದ್ದರು.