ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಸಂಭ್ರಮಾಚರಣೆ

ಬಳ್ಳಾರಿ 17: ಜೆಡಿಎಸ್ ಕಛೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಅತ್ಯಂತ ಅದ್ದೂರಿ ಸಂಭ್ರಮದಿಂದ ಆಚರಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣರವರು ಮತ್ತು ಪಕ್ಷದ ಮುಖಂಡರ ನೇತೃತ್ವದಲ್ಲಿ ಎಲ್ಲಾರೂ ಭಾಗವಹಿಸಿ, ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಹೋಗಿ ಮಾಲಾಪ9ಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣರವರು ಶ್ರೀ ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಮಾತನಾಡಿ ಅವರ ತತ್ವ ಮತ್ತು ಆದಶ9ಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಅವರ ಬರೆದಿರುವ ಮಹಾನ್ ಗ್ರಂಥವಾದ ಸಂಪೂರ್ಣ ರಾಮಾಯಣ ಎಂಬ ಪುಸ್ತಕವು ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ, ಹಾಗೂ    ಸವ9ಜನಾಂಗದ ಒಳಿತಿಗಾಗಿ  ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಯಲ್ಲನಗೌಡ,ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ  ಅಶೋಕ ಸಂಗನಕಲ್ಲು, ಮಹಿಳಾ ಅಧ್ಯಕ್ಷರಾದ ಜಮೀಲಾ ಬೇಗಂ, ಭವಾನಿ, ನೀಲಾ, ನಾಗವೇಣಿ, ರೇಣುಕಾ,ಶಮೀನ್ ಬಾನು, ಜಾವೀದ್,ರೇಷ್ಮ,ಶಬಾನಾ, ರೂಮಾನ, ವರಲಕ್ಷ್ಮಿ, ಪ್ರದೀಪ್,ಬಸವ, ಮುತ್ತು, ಮತ್ತಿತರರು ಭಾಗವಹಿಸಿದ್ದರು.