ಆಲಮಟ್ಟಿ ಡ್ಯಾಂ ಎತ್ತರಿಸಲು ಮಹಾರಾಷ್ಟ್ರಅಡ್ಡಿ- ಬಸವರಾಜ ರಾಯರೆಡ್ಡಿ

Maharashtra opposes raising of Almatti Dam - Basavaraja Rayareddy

ಆಲಮಟ್ಟಿ ಡ್ಯಾಂ ಎತ್ತರಿಸಲು ಮಹಾರಾಷ್ಟ್ರಅಡ್ಡಿ- ಬಸವರಾಜ ರಾಯರೆಡ್ಡಿ

ಯಲಬುರ್ಗಾ 04: ಆಲಮಟ್ಟಿಡ್ಯಾಂ ಅಣೆಕಟ್ಟು ಎತ್ತರಿಸುವರಾಜ್ಯ ಸರಕಾರದ ಪ್ರಯತ್ನಕ್ಕೆ ಮಹಾರಾಷ್ಟ್ರ ಸರ್ಕಾರಅನಗತ್ಯ ವಿರೋಧ ಮಾಡುವದು ಅಂತರ್‌ರಾಜ್ಯ ಬಾಂದವ್ಯಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ. ಡ್ಯಾಂ ಎತ್ತರಕ್ಕೆ ಈವರೆಗೂ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಮಹಾರಾಷ್ಟ್ರ ಸರಕಾರ ಏಕಾಏಕಿ ಆಕ್ಷೇಪ ವ್ಯಕ್ತಪಡಿಸುವದು ಅರ್ಥಹೀನ ಪ್ರಯತ್ನವಾಗಿದೆ ಎಂದು ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಹೇಳಿದರು.  

ಮೇ 9 ರಂದು ಮಹಾರಾಷ್ಟ್ರದ ಮುಖ್ಯಮಂತ್ರಿದೇವೇಂದ್ರ ಫಡ್ನವೀಸ್‌ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಲಮಟ್ಟಿಅಣೆಕಟ್ಟುಎತ್ತರವನ್ನು 519ಮೀಟರ್ನಿಂದ 524.63 ಮೀಟರ್ಗೆ ಹೆಚ್ಚಿಸುವುದರಿಂದ ಮಹಾರಾಷ್ಟ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗುತ್ತದೆ.ಸಾಂಗ್ಲಿ, ಕೊಲ್ಲಾಪುರಕ್ಕೆತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಆಲಮಟ್ಟಿ ಅಣೆಕಟ್ಟು ಎತ್ತರ ಕಾಮಗಾರಿ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಒತ್ತಾಯಿಸಿರುವದು ರಾಜ್ಯದ ಸಮಸ್ತ ರೈತರ ಹಿತಕ್ಕೆ ಮಾರಕವಾಗಲಿದೆ ಎಂದರು. 

ಉಪಮುಖ್ಯಮಂತ್ರಿಡಿಕೆ ಶಿವಕುಮಾರವರು ಡ್ಯಾಂಎತ್ತರ ವಿಷಯದಲ್ಲಿರಾಜ್ಯದಅಭಿಪ್ರಾಯವನ್ನುಕೇಂದ್ರಕ್ಕೆ ಈಗಾಗಲೇ ಸಮರ್ಥವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣ ನ್ಯಾಯಾಧೀಕರಣದತೀರ​‍್ಿನಲ್ಲಿ ನೀಡಲಾದ ಕಾನೂನಿನ ಅಂಶಗಳನ್ನು ಯಥಾವತ್ತಾಗಿ ಪಾಲನೆ ಮಾಡುವದಕ್ಕೆ ಕೇಂದ್ರ ಸರಕಾರ ಬದ್ದತೆತೋರಬೇಕು. ನಮ್ಮರಾಜ್ಯದ ಸಂಸದರು, ಕೇಂದ್ರ ಸಚಿವರಾದವರು ಈ ವಿಷಯದಲ್ಲಿರಾಜ್ಯಕ್ಕೆ ಆಗಬಹುದಾದ ಅನ್ಯಾಯವನ್ನು ಸರಿಪಡಿಸುವದಕ್ಕೆ ಮುಂದಾಗಬೇಕು ಎಂದು ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಒತ್ತಾಯಿಸಿದರು.ಬಾಕ್ಸ್‌ ಸುದ್ದಿ  

ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷಕೋಟಿರೂಪಾಯಿ ಬೇಕಾಗಿದೆಈ ಯೋಜನೆಕಾಮಗಾರಿಯನ್ನುಅನಗತ್ಯ ವಿಳಂಬ ಮಾಡುವದರಿಂದಯೋಜನೆ ವೆಚ್ಚ ಅತ್ಯಧಿಕವಾಗಿಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷಕೋಟಿರೂಪಾಯಿ ಬೇಕಾಗಿದೆ.ನಮ್ಮ ಪಾಲಿನ ನೀರು ಬಳಸಲು ಈ ಯೋಜನೆತ್ವರಿತಗತಿಯಲ್ಲಿಅನುಷ್ಟಾನವಾಗುವದು ಮುಖ್ಯವಾಗಿದೆಎಂದು ಹೇಳಿದರು.ಕೃಷ್ಣ ನ್ಯಾಯಾಧೀಕರಣದತೀರ​‍್ಿನಲ್ಲಿ ಆಲಮಟ್ಟಿಎತ್ತರಕ್ಕೆಅನುಮೋದನೆ ನೀಡಲಾಗಿದೆ. 

ಕರ್ನಾಟಕತನ್ನ ಪಾಲಿನ ನೀರನ್ನು ಬಳಕೆ ಮಾಡಲು ಮಹಾರಾಷ್ಟ್ರದಿಂದಇದುವರೆಗೂಯಾವುದೇ ಆಕ್ಷೇಪಣೆಗಳು ಇರಲಿಲ್ಲ. 2010 ಹಾಗೂ 2012 ರಲ್ಲಿನ ತೀಪುಗಳಿಗೂ ಮಹಾರಾಷ್ಟ್ರತಗಾದೆತೆಗೆದಿರಲಿಲ್ಲ. ನ್ಯಾಯಾಧೀಕರಣದತೀರ​‍್ಪನನು ಶೀಘ್ರ ಅನುಷ್ಠಾನಗೊಳಿಸುವಂತೆ ನ್ಯಾಯಾಲಯಕ್ಕೆ ಮಹಾರಾಷ್ಟ್ರ ಸರ್ಕಾರವೇ ಮಧ್ಯಂತರಅರ್ಜಿ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಆಲಮಟ್ಟಿಎತ್ತರಕ್ಕೆಆಕ್ಷೇಪ ವ್ಯಕ್ತಪಡಿಸಿರುವುದು ಯೋಜನೆಯ ದಿಕ್ಕು ತಪ್ಪಿಸುವ ಹಾದಿಯಾಗಿದೆ ಎಂದರು.