ಮಹಾಲಿಂಗಪುರ: ವಿಜೃಂಭಣೆಯಿಂದ ವಾಸವಿ ಜಯಂತಿ ಆಚರಣೆ
ಲೋಕದರ್ಶನ ವರದಿ
ಮಹಾಲಿಂಗಪುರ 16: ವ್ಯಾಪಾರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯವೈಶ್ಯ ಸಮಾಜದವರ ಕುಲದೇವತೆ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿಯನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ವಾಸವಿ ಮೂರ್ತಿಯನ್ನು ಮೆರವಣಿಗೆ ಮೂಲಕ ವಾಸವಿ ಕಲ್ಯಾಣ ಮಂಟಪಕ್ಕೆ ತರಲಾಯಿತು. ನಂತರ ವಾಸವಿ ಕಲ್ಯಾಣಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಪ್ರಮುಖರಾದ ವಿ.ಎನ್.ಗುಂಡಾ ಕನ್ಯಕಾಪರಮೇಶ್ವರಿ ವಾಸವಿ ಲೋಕಮಾತೆಯಾಗಿ ಬೆಳಗಿದ ಅನುಪಮ ತ್ಯಾಗಜೀವಿ.ಸತ್ಯ ಅಹಿಂಸೆಗಳ ಸಾಕಾರಮೂರ್ತಿ. ಧರ್ಮವನ್ನು ಮತ್ತು ಮಹಿಳೆಯರನ್ನು ರಕ್ಷಿಸಲು, ಜನತೆಯ ಜೀವ ಉಳಿಸಲು ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನದಲ್ಲಿ ನಿಂತ ಅವತಾರಿಣಿ. ಈ ಮಾತೆಯ ಪೂಜಿಸುವದರಿಂದ ಹಾಗೂ ಸ್ಮರಣೆ ಮಾಡುವದರಿಂದ ಸರ್ವ ಸಂಕಟಗಳು ನಿವಾರಣೆಯಾಗಿ ಮನೆ ಹಾಗೂ ಮನದಲ್ಲಿ ಸಂತೋಷ ನೆಲೆಸುವದೆಂದರು.
ಮಹಾಲಿಂಗಪುರ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಮುರಳಿ ಗುಂಡಾ, ಡಾ.ಕೆ.ವಿ.ದಂತಿ, ಆನಂದ ಗುಂಡಾ, ಕಿರಣ ಗುಂಡಾ, ಕೃಷ್ಣಾಜಿ ಗುಂಡಾ, ಶ್ರೀಪಾದ ಗುಂಡಾ, ಡಾ.ವಿಶ್ವನಾಥ ಗುಂಡಾ, ಮಂಜುನಾಥ ಗುಂಡಾ, ಶ್ರೀನಿವಾಸ ಗುಂಡಾ, ಸುಧೀರ ಗುಂಡಾ, ರಾಘವೇಂದ್ರ ಗುಂಡಾ, ನಾಗರಾಜ ಬೆಂಗಳೂರ, ಸುಮಂಗಲಾ ಗುಂಡಾ, ಸುವಣರ್ಾ ಗುಂಡಾ, ರೋಹಿಣಿ ಗುಂಡಾ, ಅಶ್ವಿನಿ ಗುಂಡಾ, ಸುರೇಖಾ ಗುಂಡಾ ಮುಂತಾದವರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 