ಮಡಿವಾಳ ಮಾಚಿದೇವರು ಸಮಾಜ ಸುಧಾರಕರಾಗಿದ್ದರು

ಹಾವೇರಿ: ಮಾ.06: ಮಡಿವಾಳರ ಸಮುದಾಯದವರು ಸರಳ ಸಜ್ಜನಿಕೆಯಿಂದ ಬದುಕು ಕಟ್ಟಿಕೊಂಡವರು, ಶರಣರಾದ ಮಡಿವಾಳ ಮಾಚಿದೇವರು ಎಲ್ಲ ಶರಣರ ಬಟ್ಟೆಗಳನ್ನು ಮಡಿಮಾಡುವ ಕಾಯಕದಲ್ಲಿ ಕೈಲಾಸವನ್ನು ಕಾಣುವಂತಹ ಪ್ರವೃತ್ತಿ ಶ್ರೇಷ್ಠ ಶರಣರಾಗಿದ್ದರು ಎಂದು  ಬಾಳೇಹೊಸುರ ಮಠದ ದಿಂಗಾಲೇಶ್ವರ ಸ್ವಾಮಿಜಿ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳರ ಸಮಾಜ ಸೇವಾ ಸಂಘ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಗುರುಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಜ್ಜನಿಕೆಗೆ ಹೆಸರಾಗಿರುವ ಮಡಿವಾಳ ಸಮಾಜ ಮಡಿವಾಳ ಮಾಚಿದೇವರ ಬದುಕು, ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಕೊಳ್ಳಬೇಕು. ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು  ಎಂದು ಸಲಹೆ ನೀಡಿದರು.

        ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲಾರ ಮಹದೇವಪ್ಪನವರ ಜೊತೆಗೂಡಿ ಹೋರಾಟ ನಡೆಸಿ ವೀರಮರಣವನ್ನಪ್ಪಿದ ತಿರಕಪ್ಪ ಮಡಿವಾಳರ ಪುತ್ಥಳಿಯನ್ನು ಜಿಲ್ಲಾ ಕೇಂದ್ರದಲ್ಲಿ ನಿಮರ್ಾಣ ಮಾಡಬೇಕಾಗಿದೆ ಹಾಗೂ ಸಮುದಾಭವನ ನಿಮರ್ಾಣ ಕೆಲಸ ಆಗಬೇಕಾಗಿದೆ. ಸ್ಥಳೀಯ ಶಾಸಕರು  ಈ ಕಾರ್ಯ ನೆರವೇರಿಸಬೇಕು ಎಂದು ಹೇಳಿದರು.

     ಅಥಣಿ ತಾಲೂಕಿನ ಝುಂಜರವಾಡ ಬಸವ ಕುಟೀರದ ಶರಣರಾದ ಬಸವರಾಜೇಂದ್ರ  ಅವರು  ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಜೊತೆಗೂಡಿ ಜಾತ್ಯಾತೀತ ಹಾಗೂ ಸಮ ಸಮಾಜ ನಿಮರ್ಾಣಕ್ಕೆ ಶ್ರಮಿಸಿದ ಸಮಾಜ ಸುಧಾರಕ ಮಡಿವಾಳ ಮಾಚಿದೇವ ಎಂದು  ಅಭಿಪ್ರಾಯಿಸಿದರು.

ಮಡಿವಾಳ ಮಾಚಿದೇವರು ಕೇವಲ ಬಟ್ಟೆಯ ಕೊಳೆಯನ್ನು ಮಾತ್ರವಲ್ಲದೇ ಮನಸಿನ ಕೊಳೆಯನ್ನು ತೊಳೆಯುತ್ತಾ, ಸಮಾಜದ ಮೇಲು- ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದವರು. ವಚನ ಸಾಹಿತ್ಯ ರಕ್ಷಣೆಗೆ ಶ್ರಮಿಸಿದವರು. ಈ ಸಮುದಾಯದ ಜನರು ಆಥರ್ಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ. ಮಡಿವಾಳ ಸಮಾಜಕ್ಕೆ ಸಕರ್ಾರ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

      ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ  ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಜಿಲ್ಲಾ ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಮಡಿವಾಳರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ,   ಸಮುದಾಯದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

     ಕಾರ್ಯಕ್ರಮಕ್ಕೆ ಮುನ್ನ  ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಕುಲಗುರು ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಚಿತ್ರದುರ್ಗ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮಿಜಿ ಚಾಲನೆ ನೀಡಿದರು.  ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಗುರುಭವನದವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪುರವಂತಿಕೆ ತಂಡಗಳೊಂದಿಗೆ ಕುಂಭ ಹೊತ್ತ ಮಹಿಳೆಯರು ಭಾಗವಹಿಸಿದ್ದು ಮೆರವಣಿಗೆ ಮೆರಗು ತಂದರು.