ಸಂತ್ರಸ್ಥ ರೈತರಿಗೆ ಶಾಸಕ ಸವದಿ ಸಹಾಯಧನ ವಿತರಣೆ

ಸಂತ್ರಸ್ಥ ರೈತರಿಗೆ ಶಾಸಕ ಸವದಿ ಸಹಾಯಧನ ವಿತರಣೆ MLA distributes relief funds to affected farmers

ಸಂಬರಗಿ, 23 : ಸಪ್ತಸಾಗರದ ರೈತರು ತಮ್ಮ ಕಬ್ಬಿನಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ ನಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಏಳು ರೈತರಿಗೆ ಒಟ್ಟು 5ಲಕ್ಷ 29ಸಾವಿರ 944ರೂಪಾಯಿಗಳ ಸಹಾಯಧನ ನೀಡಲಾಗಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಸವದಿ, ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ ಮತ್ತು ಆಕಸ್ಮಿಕ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ ನಿಂದಾಗಿ ಈ ರೈತರ ಕಬ್ಬು ಬೆಂಕಿಗೆ ಆಹುತಿಯಾದ ಕಾರಣ, ಸರ್ಕಾರ ಅವರಿಗೆ ಸಹಾಯಧನ ನೀಡಿದೆ ಎಂದು ಹೇಳಿದರು. ರೈತರ ಹೊಲಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ಸರಿಯಾಗಿ ಬಳಸಿಕೊಳ್ಳಬೇಕು.  

ರೈತರಾದ ಮಲ್ಲಪ್ಪ ರಾಮಪ್ಪ ಸಂಕ್ರಾಟಿ. ಸದಾಶಿವ ಘೋರೆ​‍್ಡ,ಭೀಮಪ್ಪ ಘೋರೆ​‍್ಡ, ನಾರಾಯಣ್ ವಿಠ್ಠಲ್ ಘೋರೆ​‍್ಡ, ಸಿದ್ಧಪ್ಪ ಅಪ್ಪಾಸಾಹೇಬ್ ಪಡ್ನಾಡ್, ಶ್ರೀಮತಿ ಗೌರವ್ ಅಪ್ಪಾಸಾಹೇಬ್ ಪಡ್ನಾಡ್, ಶ್ರೀಮತಿ ರಾಜಶ್ರೀ ಮಹಾವೀರ್ ಬಾರಿ ಕಾಯಿ, ಗೋಧವ್ ಅಪ್ಪಾಬಾಬ್ ಪಡ್ನಾಡ್ ಅವರಿಗೆ ಸಹಾಯಧನದ ಚೆಕ್ ನೀಡಲಾಯಿತು. 

ಈ ಸಂದರ್ಭದಲ್ಲಿ, ಹೆಸ್ಕಾಂ ಮುಖ್ಯ ಎಂಜಿನಿಯರ್ ಜಿ ವಿ ಸಂಪನವರ್‌. ಸಹಾಯಕ ಎಂಜಿನಿಯರ್ ಸಿ ಎಸ್ ಗುರುಸ್ವಾಮಿ, ಹೆಸ್ಕಾಂ ಅಧಿಕಾರಿ ಎಂ ಎಸ್ ಅವತಿ ಉಪಸ್ಥಿತರಿದ್ದರುಫೋಟೋಸಪ್ತಸಾಗರದಲ್ಲಿ ರೈತರಿಗೆ ಸಹಾಯಧನದ ಚೆಕ್ ನೀಡುತ್ತಿರುವಾಗ ಶಾಸಕ ಸವದಿ ಅಧಿಕಾರಿಗಳೊಂದಿಗೆ ಹಾಜರಿದ್ದರು.