ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಸಾಸನೂರರಿಂದ ಚಾಲನೆ
ಲೋಕದರ್ಶನ
ವರದಿ
ತಾಳಿಕೋಟೆ ತಾಲೂಕಿನ ನಾವದಗಿ 19 -ಕೊಳಿಹಾಳ ತಾಲೂಕು ಸರಹದ್ದಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಬುಧವಾರರಂದು ಭೂಮಿಪೂಜೆ
ನೆರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ
ಶಾಸಕ ಸಾಸನೂರ ಅವರು ಬಹಳದಿನಗಳಿಂದ ದುರಸ್ಥಿ
ಕಾಣದೇ ನೆನೆಗುದಿಗೆಗೆ ಬಿದ್ದಿದ್ದ ನಾವದಗಿ-ಕೊಳಿಹಾಳ(ತಾಲೂಕಾಸರಹದ್ದಿ)ನ ರಸ್ತೆಯನ್ನು ಜಿಲ್ಲಾ
ಪಂಚಾಯತ್ ವಿಜಯಪುರ 2017-18 ನೇ ಸಾಲಿನ ನಬಾರ್ಡ(ಆರ್ಐಡಿಎಫ್-23) ಯೋಜನೆಯಡಿ 80 ಲಕ್ಷ ರೂ. ವೆಚ್ಚದಲ್ಲಿ
ಸುಮಾರು 2.50 ಕೀಲೋಮೀಟರ್ ರಸ್ತೆ ಸುಧಾರಣೆ ಕೈಗೊಳ್ಳಲಾಗುತ್ತಿದೆ ಈ ಕಾಮಗಾರಿಯನ್ನು ಅಚ್ಚುಕಟ್ಟಾಗಿ
ನಿರ್ವಹಿಸಿ ಕೊಡಲು ಗುತ್ತಿಗೆದಾರರಿಗೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ
ಭೀಮನಗೌಡ ನಾವದಗಿ, ರಾಜುಸೌಕಾರ ಇಬ್ರಾಂಪೂರ, ತಾ.ಪಂ.ಸದಸ್ಯ
ರಾಜುಗೌಡ ಕೊಳೂರ, ಸಿದ್ದನಗೌಡ ಕಾರಗನೂರ, ಪ್ರಶಾಂತ ಹಾವರಗಿ, ಸುಭಾಸ ಗುಂಡಕನಾಳ, ಭೀಮನಗೌಡ ಇಬ್ರಾಹಿಂಪೂರ, ನಿಂಗಣ್ಣ ದೇಸಾಯಿ, ಬಸಣ್ಣ ಇಬ್ರಾಂಪೂರ, ಬಸನಗೌಡ ಪಾಟೀಲ(ಲಕ್ಕುಂಡಿ), ಸಿದ್ದನಗೌಡ ಬಿರಾದಾರ, ಗುತ್ತಿಗೆದಾರ ದೇಶಮುಖ ಮೊದಲಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 