ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ
MLA Kandakura visits village deity temple
ಗ್ರಾಮ ದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಕಂದಕೂರ
ಮುದ್ದೇಬಿಹಾಳ 05: ಗುರುಮಟ್ ಕಲ್ಲ್ ಶಾಸಕ ಶರಣಗೌಡ ಕಂದಕೂರ ಅವರು ಪಟ್ಟಣದ ಗ್ರಾಮ ದೇವತೆ ಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೇವಿಯ ದರ್ಶನ ಹಾಗೂ ಆಶೀರ್ವಾದ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಮೂರಾ್ನಲ್ಕು ವರ್ಷಗಳ ಹಿಂದೆ ಈ ಪಟ್ಟಣಕ್ಕೆ ಭೇಟಿ ನೀಡಿ ಶ್ರೀ ಗ್ರಾಮ ದೇವತೆ ಆಶೀರ್ವಾದ ಪಡೆದು ಹರಕೆ ಹೊತ್ತಿದ್ದೇ. ಆ ಪ್ರಕಾರ ಇಂದು ಇಲ್ಲಿಗೆ ಬರಬೇಕಾಯಿತು. ಮುದ್ದೇಬಿಹಾಳ ತಾಲೂಕಿನ ಪಟ್ಟಣದ ಬಹುತೇಕ ಜನರು ಸ್ನೇಹಿತರಿದ್ದಾರೆ. ಜತೆಗೆ ಶ್ರೀ ಗ್ರಾಮ ದೇವತೆಯ ಶಕ್ತಿ ತುಂಬಾ ಇದೇ. ಅಂದುಕೊಂಡಂತೆ ಈಡೇರಿಸುವ ದೇವತೆಯಾಗಿದ್ದಾಳೆ. ಹಾಗಾಗಿಯೇ ಇಲ್ಲಿನ ಪಟ್ಟಣದ ಎಲ್ಲ ಮುಖಂಡರು ಗಣ್ಯರು ಸೇರಿಕೊಂಡು ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಅದ್ದೂರಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಾರಣ ನಾನೂ ಕೂಡ ಈ ದೇವಿಯ ಭಕ್ತನಾಗಿದ್ದೇನೆ ಅದಕ್ಕೋಸ್ಕರ ನಾನಿಂದು ಇಲ್ಲಿಗೆ ಬಂದು ಶ್ರೀದೇವಿ ದರುಶನ ಪಡೆದು ಪುನೀತನಾಗಿದ್ದೇನೆ ಎಂದರು. ಜೊತೆಗೆ ಜಾತ್ರಾ ಕಮೀಟಿಯವರಿಗೆ 11 ಸಾವಿರ ನಗದು ದೇಣಿಗೆ ನೀಡಿದರು.
ಬಳಿಕ ಜಾತ್ರಾ ಕಮೀಟಿ ಸರ್ವ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಗುರುಮಟ್ ಕಲ್ಲ್ ಶಾಸಕ ಶರಣಗೌಡ ಕಂದಕೂರ ಅವರಿಗೆ ಕಮೀಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 