ನಿರ್ಮಾಣ ಕಾರ್ಯಾದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ಎಮ್.ಐಹೊಳೆಯವರು ವಿತರಣೆ
MLA D.M.Ihole distributed the construction mandate letters to the beneficiaries
ನಿರ್ಮಾಣ ಕಾರ್ಯಾದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ಎಮ್.ಐಹೊಳೆಯವರು ವಿತರಣೆ
ರಾಯಬಾಗ, 18; ಮನೆ ಫಲಾನುಭವಿಗಳು ಸರ್ಕಾರ ನೀಡುವ ಹಣದೊಂದಿಗೆ ತಾವು ಕೂಡ ತಮ್ಮ ಹಣವನ್ನು ಹಾಕಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.ಮಂಗಳವಾರ ತಾಲೂಕಿನ ಯಂಡ್ರಾವ ಗ್ರಾಮದ ಪಂಚಾಯತ ಕಾರ್ಯಾಲಯದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ಬಸವ ವಸತಿ ಗ್ರಾಮೀಣ (ಹೆಚ್ಚುವರಿ) ಯೋಜನೆಯಡಿ ಮಂಜೂರಾದ 29 ಮನೆಗಳ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮವನ್ನು ಸ್ವಚ್ಛವಾಗಿಡಲು ಸರ್ಕಾರದ ಸಹಾಯ ಧನದ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕೆಂದರು.
ಗ್ರಾ.ಪಂ.ಪಿಡಿಒ ಮಂಜುನಾಥ ಕಂಠಿಕಾರ, ಅಧ್ಯಕ್ಷೆ ಅಶ್ವಿನ ಧನಗರ, ಉಪಾಧ್ಯಕ್ಷೆ ಅಕ್ಕವ್ವ ಐಹೊಳೆ, ಕಲ್ಲಪ್ಪ ನಿಂಗನೂರೆ, ಸದಾಶಿವ ಘೋರೆ್ಡ, ವಿಶಾಲ ಪಡಲಾಳೆ, ಶೀಮಾ ಖೋತ, ಶಾಂತಾ ವಡ್ಡರ, ವಿನಾಯಕ ಕರಿಗಾರ ಹಾಗೂ ಗ್ರಾ.ಪಂ.ಸದಸ್ಯರು ಮತ್ತು ಫಲಾನುಭವಿಗಳು ಇದ್ದರು.
ಫೋಟೊ: 18 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಯಂಡ್ರಾವ ಗ್ರಾಮದ ಪಂಚಾಯತ ಕಾರ್ಯಾಲಯದಲ್ಲಿ ಬಸವ ವಸತಿ ಗ್ರಾಮೀಣ (ಹೆಚ್ಚುವರಿ) ಯೋಜನೆಯಡಿ ಮಂಜೂರಾದ ಮನೆಗಳ ಕಾರ್ಯಾದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ಎಮ್.ಐಹೊಳೆಯವರು ವಿತರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 