ರಾಷ್ಟ್ರಕವಿ ಎಂ.ಗೋವಿಂದಪೈ ಹುಟ್ಟುಹಬ್ಬ: ಉದಯೋನ್ಮುಖರಿಗೆ ಕವನ ರಚನಾ ಸ್ಪರ್ಧೆ
ಬೆಂಗಳೂರು, ಫೆ 11, ಕನ್ನಡ ಸಂಘರ್ಷ ಸಮಿತಿಯಿಂದ ಉದಯೋನ್ಮುಖ ಕವಿ-ಕವಯತ್ರಿಯರಿಗಾಗಿ ಕನ್ನಡದ ಪ್ರಥಮ ರಾಷ್ಟ್ರಕವಿ ಎಂ.ಗೋವಿಂದಪೈ ನೆನಪಿನ ರಾಜ್ಯಮಟ್ಟದ ಸ್ವರಚಿತ ಕವನ ರಚನಾ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಇದುವರೆಗೆ ಒಂದೂ ಕವನ ಸಂಕಲನ ಪ್ರಕಟಿಸದಿರುವವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಕನ್ನಡ ನಾಡುನುಡಿ, ಪರಿಸರ, ಪ್ರಕೃತಿ, ಭಾತೃತ್ವ, ಸಮಾನತೆ, ಸಹಬಾಳ್ವೆ, ವಿಶ್ವಮಾನವತೆ, ಪಕ್ಷಿ-ಪ್ರಾಣಿಪ್ರೇಮ, ಮಹಿಳಾ ಸಂವೇದನೆ, ದಲಿತ ಸಂವೇದನೆ, ವೈಜ್ಞಾನಿಕ ಚಿಂತನೆ, ವೈಚಾರಿಕ ಮನೋಭಾವ ಮೊದಲಾದ ವಸ್ತು ಕೇಂದ್ರೀತ ಕವನ ಕಳುಹಿಸಬಹುದಾಗಿದೆ.ಕವನಗಳನ್ನು ಈ ಮಾಸಾಂತ್ಯದ ವೇಳೆಗೆ ಸಲ್ಲಿಸಬಹುದಾಗಿದ್ದು, ಮೊದಲನೆಯ ಬಹುಮಾನ 2ಸಾವಿರ ರೂ, ಎರಡನೆಯ ಬಹುಮಾನ 1,500 ರೂ, ಮೂರನೆಯ ಬಹುಮಾನ 1 ಸಾವಿರ ರೂ, ಸಮಾಧಾನಕರ ಬಹುದಾನ 500 ರೂ ನಿಗದಿ ಮಾಡಲಾಗಿದೆ. ಕವನ ಕಳುಹಿಸಲು ವಿಳಾಸ : ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ. ೧ ಮತ್ತು ೨, ೨ನೇ ಮಹಡಿ, ೧ನೇ ಮುಖ್ಯರಸ್ತೆ, ಮೂರನೇ ಅಡ್ಡರಸ್ತೆ, ಶ್ರೀನಿಧಿ ಬಡಾವಣೆ, ಕೋಣನಕುಂಟೆ, ಬೆಂಗಳೂರು-೫೬೦೦೬೨ ಸಂಪರ್ಕ: ೯೪೪೮೮ ೫೧೭೮೧. ಮಿಂಚಂಚೆ : drkovemragowda@gmail.com
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 