ಚಿರತೆ ಹೆಜ್ಜೆ ಗುರುತು, ಆತಂಕದಲ್ಲಿ ಜನತೆ
Leopard footprints, people worried
ತಾಳಿಕೋಟೆ 04: ತಾಲ್ಲೂಕಿನ ಹಿರೂರ ಗ್ರಾಮದ ಜಮೀನಿನಲ್ಲಿ ಚಿರತೆಯ ಹೆಜ್ಜೆಗುರುತುಗಳು ಕಂಡು ಬಂದಿದ್ದು ಡೋಣಿ ದಂಡೆಯ ಗುತ್ತಿಹಾಳ, ಬೋಳವಾಡ ಸುತ್ತಮುತ್ತಲಿನ ಗ್ರಾಮಸ್ಥರು ಭಯದ ವಾತಾವರಣ ಮೂಡಿಸಿದೆ.ಡಿ.31 ರಂದು ಚಿರತೆ ಹೆಜ್ಜೆ ಗುರುತುಗಳ ಬಗ್ಗೆ ರೈತರು ನೀಡಿದ ಮಾಹಿತಿಯ ಮೇರೆಗೆ ಸ್ಥಳ ಪರೀಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಅದು ಚಿರತೆಯ ಹೆಜ್ಜೆಗುರುತು ಎಂಬುದನ್ನು ಖಚಿತಪಡಿಸಿದ್ದಾರೆ.ಡಿ.31ರಿಂದ ಿಂದು ಶನಿವಾರದವರೆಗೆ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಚಿರತೆಯ ಚಲನವಲನದ ಬಗ್ಗೆ ಪರೀಶೀಲನೆ ನಡೆಸಿದ್ದಾಗಿ ಚಿರತೆ ಹಾಯ್ದು ಹೋಗಿರುವ ಹೆಜ್ಜೆ ಗುರುತಗಳಿವೆ. ಆದರೆ ಅಲ್ಲಿ ಇಲ್ಲಿ ಸುಳಿದಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ, ?ದು ಸಿಂದಗಿ ತಾಲ್ಲೂಕಿನತ್ತ ಹೋಗಿರುವ ಸಾಧ್ಯತೆಗಳಿವೆ ಎಂದರು,ಪತ್ರಿಕೆಯೊಂದಿಗೆ ಮಾತನಾಡಿದ ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಬಿ.ಐ.ಬಿರಾದಾರ, ಚಿರತೆ ಒಂದೇ ಕಡೆ ಇರುವುದಿಲ್ಲ, ಸದ್ಯ ಹೆಜ್ಜೆ ಗುರುತು ಹೋಗಿರುವ ಬಗ್ಗೆ ಮಾತ್ರ ಇವೆ. ಕಳೆದ ಮೂರುದಿನಗಳಿಂದ ನಮ್ಮ ಸಿಬ್ಬಂದಿ ಅದರ ಹೆಜ್ಜೆ ಗುರುತುಗಳ ಹುಡುಕಾದಲ್ಲಿದ್ದಾರೆ. ನಂತರ ಎಲ್ಲಿಯೂ ಪತ್ತೆಯಾಗಿಲ್ಲ, ಈ ಬಗ್ಗೆ ಆತಂಕ ಬೇಡ, ಆದರೆ ಜನತೆ ಜಾಗೃತರಾಗಿರುವಂತೆ ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 