‘ಸಂವಿಧಾನದ ಆಶೋತ್ತರಗಳು’ ಉಪನ್ಯಾಸ

‘ಸಂವಿಧಾನದ ಆಶೋತ್ತರಗಳು’ ಉಪನ್ಯಾಸ  Lecture on ‘Aspirations of the Constitution’

ಧಾರವಾಡ  29: ಕರ್ನಾಟಕ ವಿದ್ಯಾವರ್ಧಕ ಸಂಘವು, ಎಂ. ಸುದರ್ಶನರಾಜ ಫೌಂಢೇಶನ್ ದತ್ತಿ ಅಂಗವಾಗಿ ದಿ. 30 ರಂದು ಸೋಮವಾರ ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಸಂವಿಧಾನದ ಆಶೋತ್ತರಗಳು’ ವಿಷಯ ಕುರಿತು ಉಪನ್ಯಾಸ ಕಾರ‌್ಯಕ್ರಮ ಏರಿ​‍್ಡಸಿದೆ.  

ಧಾರವಾಡದ ವಿಶ್ರಾಂತ ಪ್ರಾಚಾರ್ಯರಾದ ಡಾ. ಸುನಿತಾ ಪುರೋಹಿತ ಅಧ್ಯಕ್ಷತೆ ವಹಿಸುವರು.  ಬೆಂಗಳೂರು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎಸ್‌. ಪಾಟೀಲ ‘ಸಂವಿಧಾನದ ಆಶೋತ್ತರಗಳು’ ವಿಷಯ ಕುರಿತು ಅತಿಥಿ ಉಪನ್ಯಾಸ ನೀಡುವರು.  

ಧಾರವಾಡದ ವಕೀಲರು ಮತ್ತು ಸಾಹಿತಿಗಳಾದ  ಎಂ. ಸುದರ್ಶನರಾಜ ಮತ್ತು ನವದೆಹಲಿ ಸುಪ್ರೀಂಕೋರ್ಟ ವಕೀಲರಾದ ಸಿ. ಎಂ. ಅಂಗಡಿ ಗೌರವ ಉಪಸ್ಥಿತರಿರುವರು.  ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.