ಶಾಸಕ ಅರುಣಕುಮಾರ ಪೂಜಾರ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರು 02: ನಗರದ ಶ್ರೀ ಮೌನೇಶ್ವರ ದೇವಸ್ಥಾನ ಕಲ್ಯಾನಮಂಟಪದಲ್ಲಿ ನಡೆದ ಭಗವಾನ್ ಶ್ರೀ ಮೌನೇಶ್ವರ ಸ್ವಾಮಿಯ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ, ಕ್ಷೇತ್ರ ಶಾಸಕ ಅರುಣಕುಮಾರ ಪೂಜಾರ ಮತ್ತು ಬಿಜೆಪಿ ಮುಖಂಡ ಚೋಳಪ್ಪ ಕಸವಾಳ ಅವರಿಗೆ ಸಮಿತಿಯ ಪರವಾಗಿ ಅಧ್ಯಕ್ಷ ಓಂಕಾರಪ್ಪ ಅಕರ್ಾಚಾರಿ ಅವರು ಸನ್ಮಾನಿಸಿ ಗೌರಿವಿಸಿದರು.
ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮುಖಂಡರು ಈಗಾಗಲೇ ಆವರಣದಲ್ಲಿ ಪ್ರೌಢಶಾಲೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ಬೇರೆಕಡೆ ಸ್ಥಾಳಾಂತರಿಸಬೇಕಾಗಿದೆ. ಮಾಜಿ ವಿಧಾನಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರಿಗೆ ಮಾಡಿಕೊಳ್ಳಲಾದ ಮನವಿ ಮೇರೆಗೆ ವೀರಭದ್ರೇಶ್ವರ ನಗರದಲ್ಲಿ(ಸವರ್ೆ.ನಂ.309ಬ, ಪ್ಲಾಟ್ ನಂ.72ರಲ್ಲಿ) ನಗರದಲ್ಲಿ 21ಗುಂಟೆ 2ಆಣೆ ಬೈಲು ಜಾಗೆಕೊಡಲು ನಗರಸಭೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು 26-3-2018ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸ್ ಮಾಡಿದ್ದಾರೆ.
ಈ ಸ್ಥಳವು ಸಾರ್ವಜನಿಕ ಶಿಕ್ಷಣಕ್ಕಾಗಿ ಮೀಸಲಿಟ್ಟ ನಿವೇಶನವಾಗಿದೆ. ದಯಾಳುಗಳಾದ ತಾವುಗಳು ಸದರಿ ಜಾಗೆಯನ್ನು ನಮ್ಮ ಪ್ರೌಢಶಾಲೆಗೆ ಮಂಜೂರು ಮಾಡಿಕೊಟ್ಟು ಸರ್ವಜನಾಂಗದ ಮಕ್ಕಳಿಗೆ ಶಿಕ್ಷಣವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಜಕಣಾಚಾರ ಅರ್ಕಾಚಾರಿ, ಕೃಷ್ಣಾಚಾರ ಅರ್ಕಾಚಾರಿ, ರಾಮಪ್ಪ ಅರ್ಕಾಚಾರಿ, ಬಸವರಾಜ ಬಡಿಗೇರ, ನಾಗೇಂದ್ರಪ್ಪ ಅಕರ್ಾಚಾರಿ, ಪರಮೇಶ್ವರಾಚಾರ ಬಡಿಗೇರ, ಮಾರ್ತಾಂಡಪ್ಪ ಕಮ್ಮಾರ, ಫಕ್ಕೀರೇಶ ಬಡಿಗೇರ, ನಾಗರಾಜ ಬಡಿಗೇರ, ವೀರಣ್ಣ ಅರ್ಕಾಚಾರಿ ಸೇರಿದಂತೆ ಸಮಾಜದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 