ಕೊವಿದ್-19: ಭಾರತದಲ್ಲಿ ಸೋಂಕಿನಿಂದ ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಒಟ್ಟು 415 ಪ್ರಕರಣಗಳು ದೃಢ
ನವದೆಹಲಿ, ಮಾರ್ಚ್ 23, ಕೊವಿದ್-19 ಸೋಂಕಿನಿಂದ ಸೋಮವಾರ ಬೆಳಿಗ್ಗೆ ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 415 ಕ್ಕೆ ತಲುಪಿದ್ದು, ಇದುವರೆಗೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸೋಮವಾರದ ರಾಜ್ಯವಾರು ಮಾಹಿತಿಯನ್ನು ಇನ್ನೂ ಸಿದ್ಧಪಡಿಸಲಾಗಿಲ್ಲ.ಸೋಮವಾರದವರೆಗೆ, 64 ಹೊಸ ಪ್ರಕರಣಗಳು ಮತ್ತು ಎರಡು ಸಾವುಗಳ ಸಂಭವಿಸಿವೆ. ಮಹಾರಾಷ್ಟ್ರವು ಅತಿ ಹೆಚ್ಚು, 60 ಪ್ರಕರಣಗಳೊಂದಿಗೆ ಕೇರಳ ಎರಡನೇ ಸ್ಥಾನದಲ್ಲಿದೆ. ದೆಹಲಿ ಸೋಂಕಿನ 28 ಪ್ರಕರಣಗಳು ದೃಢಪಟ್ಟಿದ್ದು, ಒಂದು ಸಾವು ವರದಿಯಾಗಿದೆ. ಭಾರತದಲ್ಲಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 23 ರಷ್ಟಿದ್ದು, ಒಬ್ಬ ರೋಗಿಯು ದೇಶದಿಂದ ಹೊರಹೋಗಿದ್ದಾನೆ ಎಂದು ಸಚಿವಾಲಯ ತಿಳಿಸಿದೆ.ಭಾರತದಲ್ಲಿ 41 ವಿದೇಶಿ ಪ್ರಜೆಗಳು ಕರೋನವೈರಸ್ನಿಂದ ಬಳಲುತ್ತಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೆ ಒಟ್ಟು 18,383 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 15,17,327 ಪ್ರಯಾಣಿಕರನ್ನು ವಿವಿಧ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ರಾಷ್ಟ್ರ ರಾಜಧಾನಿ, ವಾಣಿಜ್ಯ ರಾಜಧಾನಿ ಮತ್ತು ಮಹಾನಗರಗಳು ಸೇರಿದಂತೆ ಒಟ್ಟು 75 ಜಿಲ್ಲೆಗಳನ್ನು ಮಾರ್ಚ್ 31 ರವರೆಗೆ ಲಾಕ್ಡೌನ್(ಸಂಪೂರ್ಣಸ್ತಬ್ಧ) ಮಾಡಲಾಗಿದೆ.ರೈಲ್ವೆ ಸೇವೆಗಳು, ಅಂತರರಾಜ್ಯ ಬಸ್ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ದೂರಸಂಪರ್ಕ, ಔಷಧಿ ಅಂಗಡಿಗಳು ಮತ್ತು ಕಿರಾಣಿ ಮಾತ್ರ ತೆರೆದಿರುತ್ತವೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 