ಇನ್ನೊಂದು ತಿಂಗಳಲ್ಲಿ ಭಾರತದಲ್ಲೇ ಕೋವಿಡ್ -೧೯ಕ್ಕೆ ಲಸಿಕೆ ...!
ನವದೆಹಲಿ,ಮೇ
೩, ಕೋವಿಡ್ -೧೯ ಸೋಂಕು ರೋಗ ಇಡೀ ಜಗತ್ತನ್ನು ನಡುಗಿಸುತ್ತದೆ. ಕೊರಿನಾ
ಸೋಂಕು ದಾಳಿಗೆ ಬಹಳಷ್ಟು ದೇಶಗಳು ಲಾಕ್ ಡೌನ್ ಜಾರಿಗೊಳಿಸಿವೆ. ಆದರೆ,
ಇನ್ನೊಂದು ತಿಂಗಳು ಅವಧಿಯಲ್ಲಿ, ಕೊರೊನಾ ವೈರಸ್ ಲಸಿಕೆ ಲಭಿಸುವ ಸಾಧ್ಯತೆಯಿದೆ.
ಈ ಲಸಿಕೆಯನ್ನು ಭಾರತದಲ್ಲಿ ರೂಪಿಸುವ ಸಾಧ್ಯತೆಗಳಿವೆ. ದೇಶದಲ್ಲಿ
ಅತ್ಯುನ್ನತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸಿಎಸ್ಐಆರ್ (ಕೌನ್ಸಿಲ್ ಆಫ್
ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್) ಪ್ರಸ್ತುತ ಕರೋನವೈರಸ್ ತಡೆಗಟ್ಟುವ ಔಷಧಿ
ಕುರಿತು ಪ್ರಯೋಗಗಳನ್ನು ನಡೆಸುತ್ತಿದೆ.ಆದರೆ, ಮತ್ತಷ್ಟು ವಿಸ್ತೃತ
ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಕರಿಂದ ಅನುಮತಿ ಕೋರಲಾಗಿದೆ. ಎಲ್ಲವೂ
ಸರಿಹೋದರೆ, ಲಸಿಕೆ ತಿಂಗಳಲ್ಲೇ ಲಸಿಕೆ ಲಭಿಸುವ ಸಾಧ್ಯತೆಯಿದೆ ಎಂದು
ಸಂಶೋಧನೆಯಲ್ಲಿ ತೊಡಗಿಸಿಕೊಂಡು ತಜ್ಞರು ಹೇಳಿದ್ದಾರೆ.
ಕ್ಯಾಡಿಲ್ಲಾ
ಫಾರ್ಮಾಸ್ಯುಟಿಕಲ್ಸ್- ಸೆಪ್ಸಿವಾಕ್ ಈ ಸಂಶೋಧನೆಯನ್ನು ಮಾಡಲಾಗುತ್ತಿದೆ. ಈ ಎರಡೂ
ಸಂಸ್ಥೆಗಳ ನಡುವೆ ಎರಡು ವರ್ಷಗಳ ಹಿಂದೆ ಒಪ್ಪಂದವಿದೆ. ಈ ಒಪ್ಪಂದದ ಭಾಗವಾಗಿ
ಸಿಐಎಸ್ಆರ್ ಸಂಶೋಧನೆ ನಡೆಸುತ್ತಿದೆ. ಇಮ್ಯುನೊಥೆರಪಿಗೆ ಚಿಕಿತ್ಸೆ ಕಲ್ಪಿಸಲು
ಡ್ರಗ್ ಕಂಟ್ರೋಲ್ ಆಫ್ ಇಂಡಿಯಾ ಅನುಮತಿ ನೀಡಿದೆ.ಮತ್ತೊಂದೆಡೆ... ದೆಹಲಿಯ
ಏಮ್ಸ್, ಭೋಪಾಲ್ ಏಮ್ಸ್, ಇತರೆಡೆ ೫೦ ಕ್ಕೂ ಹೆಚ್ಚು ಮಂದಿ ರೋಗಿಗಳ ಮೇಲೆ ಸಂಶೋಧನೆ
ನಡೆಸಿದೆ. ೩೦ ರಿಂದ ೪೫ ದಿನಗಳಲ್ಲಿ ಫಲಿತಾಂಶಗಳು ಬರಲಿವೆ. ನಂತರ ೩ ನೇ ಹಂತದ
ಪ್ರಯೋಗಗಳನ್ನು ನಡೆಸಲಾಗುತ್ತದೆ. ಪ್ರಸ್ತುತ ತುರ್ತು ಸಂದರ್ಭದಲ್ಲಿ ಭಾರತೀಯ ಔಷಧ
ನಿಯಂತ್ರಕರಿಂದ ಅನುಮತಿ ಶೀಘ್ರವಾಗಿ ಲಭಿಸುವ ನಿರೀಕ್ಷೆಯಿದೆ. ಮೂರನೇ ಹಂತದಲ್ಲಿ
೧.೧೦೦ ಜನರ ಮೇಲೆ ಸಂಶೋಧನೆಗಳು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 