ಸೆ, 04 ಗುರುವಾರದಂದು ಚಿಮ್ಮಡದ ಶ್ರೀ ಪ್ರಭುಲಿಂಗೇಶ್ವರರ ಕಿಚಡಿ ಜಾತ್ರೆ ಹಾಗೂ ರಥೋತ್ಸವ
Khichdi Fair and Chariot Festival of Sri Prabhulingeshwara of Chimmada
ಮಹಾಲಿಂಗಪುರ 03: ಈ ಭಾಗದ ಚಿಮ್ಮಡ ಗ್ರಾಮದ ಆರಾದ್ಯ ದೈವ ಶ್ರೀ ಪ್ರಭುಲಿಂಗೇಶ್ವರರ "ಕಿಚಡಿ" ಜಾತ್ರೆ ಸೆ, 04 ಗುರುವಾರದಂದು ವಿಜ್ರಂಭನೆಯಿಂದ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 9 ಘಂ.ಗೆ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ ಅದೇದಿನ ರಾತ್ರಿ 10ಘಂಗೆ ನೂರಾರು ಅಲಂಕೃತ ಟ್ರಾಕ್ಟರ್ಗಳ ಮೂಲಕ ಅಕ್ಕಿ, ಬೇಳೆ, ಮಸಾಲೆಖಾರ ಸೇರಿದಂತೆ ಪ್ರಸಾದ ಸಾಮಗ್ರಿಗಳನ್ನು ಗುಡ್ಡದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ಸಾಗಿಸಲಾಗುತ್ತದೆ.
ಗುರುವಾರ ಬೆಳಿಗ್ಗೆ4 ಘಂ.ಗೆ ಪ್ರಭುಲಿಂಗೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮುಂ.9 ಕ್ಕೆ ಪಲ್ಲಕ್ಕಿ ಮಹೋತ್ಸವ 10 ಕ್ಕೆ ನಡೆಯಲಿರುವ ಕಿಚಡಿ ಪ್ರಸಾದ ಲೋಕಾರೆ್ಣಯಲ್ಲಿ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಶ್ರೀಮಠಗಳ ಪೂಜ್ಯ ಮಠಾಧೀಶರು ಪಾಲ್ಗೋಳ್ಳುವರು ನಂತರ ವಚನ ಚಿಂತನಗೋಷ್ಠಿ ಹಾಗೂ ಜನಪದ ಜಾತ್ರೆ ನಡೆಯಲಿದೆ ಎಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ. ಮುಂ 10 ಘಂ.ಗೆ ಕಿಚಡಿ ಪ್ರಸಾದ ವಿತರಣೆ ಪ್ರಾರಂಭವಾಗಲಿದ್ದು ಸಂಜೆ 6:30 ರವರೆಗೆ ನಿರಂತರವಾಗಿ ನಡೆಯಲಿದೆ.
ಸಂಜೆ 7 ಘಂಟೆಗೆ ಜೋಡಿ ನಂದಿಕೋಲ ಉತ್ಸವದೊಂದಿಗೆ ನೂತನವಾಗಿ ನಿರ್ಮಿಸಲಾಗಿರುವ ಪ್ರಭುಲಿಂಗೇಶ್ವರರ ರಥೋತ್ಸವ ಸಕಲ ವಾದ್ಯ ವೃಂದಗಳೊಂದಿಗೆ ವಿಜ್ರಂಬನೆಯಿಂದ ನಡೆಯಲಿದೆ. ರಾತ್ರಿ ಶ್ರೀ ಪ್ರಭುಲಿಂಗೇಶ್ವರ ಕಲೆ ಮತ್ತು ಸಂಸ್ಕೃತಿಕ ಯುವ ನಾಟ್ಯ ಸಂಘದ ಕಲಾವಿದರು ಅಭಿನಯಿಸುವ "ಶೆರೆ ಅಂಗಡಿ ಸಂಗವ್ವ" ಹಾಗೂ ಶ್ರೀ ಕರಿಸಿದ್ದೇಶ್ವರ ಯುವಕ ನಾಟ್ಯ ಸಂಘದಿಂದ ಕಿರು ತೆರೆ ತಾರೆಯರಾದ ಕಾಮಿಡಿ ಕಿಲಾಡಿಗಳು ವಿಜೇತ ಹರೀಶ ಹಿರಿಯೂರು, ದಾನಪ್ಪ ಮೂಡಲಗಿ ಸೇರಿದಂತೆ ಪ್ರಮುಖ ತಾರೆಯರಿಂದ ಅಭಿನಯಿಸಲಾಗುವ "ಕಲಿತ ಜೀವಕ್ಕೆ ಬೆರೆತ ಜೀವ"ಎಂಬ ಸಾಮಾಜಿಕ ನಾಟಕಗಳ ಪ್ರದರ್ಶನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಜಾತ್ರಾ ಮಹೋತ್ಸವಕ್ಕೆ ಈ ಭಾಗದ ಪ್ರಮುಖ ಪೀಠಗಳ ಪೂಜ್ಯ ಪೀಠಾಧಿಪತಿಗಳು ಹಾಗೂ ಪ್ರಮುಖ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಿಚಡಿ ಪ್ರಸಾದ ಸ್ವೀಕರಿಸಬೇಕೆಂದು ಪ್ರಭುಲಿಂಗೇಶ್ವರ ಟ್ರಷ್ಟ ಸಮೀತಿಯ ಪ್ರಮುಖರು ಮನವಿ ಮಾಡಿದ್ದಾರೆ. ಸ್ಥಾನ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 