ಕರ್ನಾಟಕ ಜಾನಪದ ಅಕಾಡೆಮಿ: ವಾರ್ಷಿಕ ಗೌರವ ಪ್ರಶಸ್ತಿಗೆ ಕೆ.ಶಂಕರ​‍್ಪ ಆಯ್ಕೆ

Karnataka Folk Academy: K. Shankar selected for Annual Honorary Award

ಕರ್ನಾಟಕ ಜಾನಪದ ಅಕಾಡೆಮಿ: ವಾರ್ಷಿಕ ಗೌರವ ಪ್ರಶಸ್ತಿಗೆ ಕೆ.ಶಂಕರ​‍್ಪ ಆಯ್ಕೆ 

ಬಳ್ಳಾರಿ 03: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರ​‍್ಪ ಅವರು ಹಗಲುವೇಷ ಕಲಾ ಪ್ರಕಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್‌.ನಮ್ರತ ಅವರು ತಿಳಿಸಿದ್ದಾರೆ. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಮತ್ತು ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು. ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ  ತೀರ್ಮಾನದಂತೆ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಾನಪದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.