ಕಂಪ್ಲಿ : ಮಹಿಳಾ ಸಮಾನತೆ ನೀಡಿದವರಲ್ಲಿ ಅಕ್ಕಮಹಾದೇವಿ ಪ್ರಮುಖ: ಪ್ರವೀಣ
ಲೋಕದರ್ಶನ ವರದಿ
ಕಂಪ್ಲಿ 01: ಇಲ್ಲಿನ ಸತ್ಯನಾರಾಯಣಪೇಟೆಯ ವರನಂದೀಶ್ವರ ಅಪಾಟರ್್ಮೆಂಟ್ನಲ್ಲಿನ ಸೈ'ಗ್ರಂಥಾಲಯ ಆವರಣದಲ್ಲಿ, ಗುರುವಾರ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕು ಘಟಕ ಹಮ್ಮಿಕೊಂಡ 106ನೇ ಮಹಾಮನೆ ಕಾರ್ಯಕ್ರಮ ಜರುಗಿತು. ಇಲ್ಲಿನ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಎನ್.ಪ್ರವೀಣ್ ಕುಮಾರ್ 'ಅಕ್ಕಮಹಾದೇವಿ ವಚನಗಳಲ್ಲಿ ಮಹಿಳಾ ಸಂವೇದನೆ' ಕುರಿತು ವಿಶೇಷ ಉಪನ್ಯಾಸ ನೀಡಿ, ಮಹಿಳಾ ಸಮಾನತೆಯನ್ನು, ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುವಲ್ಲಿ ಶಿವಶರಣೆ ಅಕ್ಕಮಹಾದೇವಿ ಪ್ರಮುಖಳಾಗಿದ್ದಾಳೆ. ಮಹಿಳೆಯಲ್ಲಿ ಸೂಕ್ತ ಸ್ಥಾನಮಾನ, ಬದ್ಧತೆಯ ಜಾಗೃತಿಯನ್ನು ಮೂಡಿಸುವಲ್ಲಿ ಅಕ್ಕನವಚನಗಳು ಇಂದಿಗೂ ಪ್ರಸ್ತುತವಾಗಿದೆ. ಸರಳವಾದ ಆಡು ನುಡಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಅಕ್ಕ ಜನಸಾಮಾನ್ಯರ ಗಮನಸೆಳೆಯುತ್ತಾಳೆ. ಎಂದುರು.
ರಂಗಭೂಮಿ ಕಲಾವಿದ ಕೆ.ಶ್ರೀನಿವಾಸಪ್ಪ ಮಹಾಮನೆಗೆ ಚಾಲನೆ ನೀಡಿದರು. ಶ್ರೀರಕ್ಷಾ ಪ್ರಾಥರ್ಿಸಿದರು, ಬಡಿಗೇರ ಜಿಲಾನ್ ಸ್ವಾಗತಿಸಿದರು, ಮಹ್ಮದ್ ಹನೀಫ್ ವಂದಿಸಿದರು,
ಶರಣ ಸಾಹಿತ್ಯ ಪರಿಷತ್ತಿನಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ನಿರೂಪಿಸಿದರು. ಶಿಕ್ಷಕಿ ಜುಬೇದಾ ಬೇಗಂ, ಸಾಜೀದಾ, ಜಾಹೀದಾ, ಗರಡಿ ಕಮಲ, ಸವಿತಾ, ಜಿ.ನಂದೀಶ್, ನಾಗವೇಣಪ್ರವೀಣ್ ಕುಮಾರ್, ಸೃಷ್ಠಿ, ಕುಂದನ್, ಚಿರಂತನ್, ಅಕ್ಷಿತ್ ಸೇರಿ ಅನೇಕರು ಉಪಸ್ಥಿತರಿದ್ದರು
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 