ಪತ್ರಿಕಾ ವೃತ್ತಿ ಹೂವಿನ ಹಾಸಿಗೆ ಅಲ್ಲ ಮುಳ್ಳಿನ ದಾರಿಯಾಗಿದೆ
ಕೊಪ್ಪಳ 19: ಪ್ರತಿಯೊಬ್ಬ ಪತ್ರಕರ್ತನಿಗೆ ಆತ್ಮಸ್ಥೈರ್ಯ, ಬರವಣಿಗೆ, ಸಾಮಾಜಿಕ ಜವಾಬ್ದಾರಿ ಅವಶ್ಯಕವಾಗಿದೆ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಸಿ.ಮಂಜುನಾಥ ಹೇಳಿದರು. ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಅಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು. ಪತ್ರಿಕಾ ವೃತ್ತಿ ಹೂವಿನ ಹಾಸಿಗೆ ಅಲ್ಲ, ವೃತ್ತಿಯಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ವರದಿಗಾರನು ವೃತ್ತಿಯಲ್ಲಿ ಯಶಸ್ಸು ಕಾಣಬೇಕಾಗುತ್ತದೆ. ವರದಿಗಾರನು ವರದಿ ಮಾಡುವಾಗ ಮಾನಸಿಕವಾಗಿ, ದೈಹಿಕವಾಗಿ ಸಿದ್ಧತೆಯಲ್ಲಿರಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ಸೋಷಿಯಲ್ ಮೀಡಿಯಾಗಳು ಸವಾಲಾಗಿ ಪರಿಣಿಮಿಸಿದೆ.ಪತ್ರಕರ್ತರ ವರದಿಗಳು ಜನಪರ, ಪ್ರಾಮಾಣಿಕತೆಯಿಂದ, ನಿಷ್ಠುರವಾಗಿ ಕೂಡಿರಬೇಕು, ಪತ್ರಕರ್ತರು ಪತ್ರಿಕೋದ್ಯಮಕ್ಕೆಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕು ಜೊತೆಗೆ ಉತ್ತಮ ಕೌಶಲ್ಯ, ಮಾತುಗಾರಿಕೆ, ಉತ್ತಮ ಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಯುವ ಪತ್ರಕರ್ತರು ಒದುವ ಹವ್ಯಾಸ ,ಉತ್ತಮ ಬರವಣಿಗೆ ರೂಡಿಸಿಕೊಳ್ಳಬೇಕು ಎಂದರು. ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ.ಕೆ.ವಿ.ಪ್ರಸಾದ ಮಾತನಾಡಿ , ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಒದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಒದಿದ ನಂತರ ಸರಿಯಾಗಿ ಗ್ರಹಿಸಿಕೊಳ್ಳುವ ಶಕ್ತಿಯನ್ನು ಹೊಂದುವ ಮೂಲಕ ಅದನ್ನು ವೇದಿಕೆಯ ಮೇಲೆ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವ ಕೌಶಲ್ಯವನ್ನು ಬೆಳಸಿಕೊಳ್ಳಬೇಕು ಎಂದರು.
ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ವಿದ್ಯಾರ್ಥಿಗಳು ಬರವಣಿಗೆ ರೂಢಿಸಿಕೊಂಡರೆ ನಿಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಬರವಣಿಗೆಯ ಮೂಲಕ ಪತ್ರಕರ್ತರು, ಸಾಹಿತಿ, ಕವಿ, ಲೇಖಕರಾಗಬಹುದು ಎಂದರು. ಈ ಕಾರ್ಯಕ್ರಮ ಉಪನ್ಯಾಸಕರಾದ ಸಂತೋಷಕುಮಾರ್ ಹೆಚ್ ಕೆ, ರಂಗನಾಥ್, ಶ್ರೀಕಾಂತ, ಪ್ರವೀಣ ಪೋಲಿಸ ಪಾಟೀಲ ಹಾಗೂ ವಿವಿಧ ವಿಭಾಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿ ಪದ್ಮಜಾ ನಾಗಲಾಪುರಮಠ ನಿರೂಪಿಸಿದರು.