ಜವಾಹರ ಸಕ್ಕರೆ ಕಾರ್ಖಾನೆ ದಾಖಲೆಯ 13.53 ಲಕ್ಷ ಮೆ.ಟನ್ ಕಬ್ಬು ನುರಿಸಿದೆ: ಕಾತ್ರಾಳೆ..!
ಕಾಗವಾಡ 21: ಕಲ್ಲಪ್ಪಣ್ಣಾ ಅವಾಡೆ ಜವಾಹರ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಲಿ., ಹುಪರಿ ಇವರು 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ದಾಖಲೆಯ 13.53 ಲಕ್ಷ ಮೆ.ಟನ್ ಕಬ್ಬು ನುರಿಸಿ, ರೈತರಿಗೆ ಈಗಾಗಲೇ ರೂ. 3150 ರಂತೆ ಬಿಲ್ ಪಾವತಿಸಲಾಗಿದೆ. ಜೊತೆಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. ನಂತೆ ಸಕ್ಕರೆ ಕೂಡಾ ವಿತರಿಸಲಿದ್ದು, ಈಗ ಸಕ್ಕರೆ ಕಾರ್ಡಗಳನ್ನು ವಿತರಿಸಲಾಗುತ್ತಿದೆಯೆಂದು ಮುಖಂಡ ಅಶೋಕ ಕಾತ್ರಾಳೆ ತಿಳಿಸಿದ್ದಾರೆ.
ಅವರು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ದಿ. 21 ರಂದು ಕಾರ್ಖಾನೆಯ ಅಕಿವಾಟ ವೃತ್ತ ವ್ಯಾಪ್ತಿಯ ಶಿರಗುಪ್ಪಿ, ಯಡೂರ, ಚಂದೂರ, ಮಾಂಜರಿ, ಜುಗೂಳ, ಮಂಗಾವತಿ, ಶಹಾಪೂರ, ಇಂಗಳಿ ಮತ್ತು ಮೊಳವಾಡ ಗ್ರಾಮದ ರೈತ ಸದಸ್ಯರಿಗೆ ಹಾಗೂ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಡಗಳನ್ನು ವಿತರಿಸಿ, ಮಾತನಾಡುತ್ತಿದ್ದರು. ಪ್ರತಿಯೊಬ್ಬ ರೈತರಿಗೆ ಸಕ್ಕರೆ ಕಾರ್ಡಗಳನ್ನು ಪಡೆದುಕೊಳ್ಳಲು ತಿಳಿಸಲಾಗಿದ್ದು, ಕಾರ್ಡಗಳನ್ನು ಪಡೆಯದೇ ಇದ್ದ ರೈತರು ಕಾರ್ಖಾನೆಯ ಸ್ಥಾನಿಕ ಕಚೇರಿಯ ಸಿಬ್ಬಂದಿಗಳನ್ನು ಸಂಪರ್ಕಿಸಿ, ತಮ್ಮ ಕಾರ್ಡುಗಳನ್ನು ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಖಾನೆಯ ನಿರ್ದೇಶಕ ಸಂಜಯಕುಮಾರ ಕೋಥಳಿ ಸೇರಿದಂತೆ ಮುಖಂಡರಾದ ಅಭಯಕುಮಾರ ಅಕಿವಾಟೆ, ಅಪ್ಪಾಸಾಬ ಪಾಟೀಲ, ತಾತ್ಯಾಸಾಬ ಚೌಗುಲೆ, ಪಾರೀಸಾ ಪೊದಾಲೆ, ಭರತ ಲಾಂಡಗೆ ಹಾಗೂ ಕಾರ್ಖಾನೆಯ ಅಕಿವಾಟ ವೃತ್ತದ ಅಗ್ರಿ ಓರಕರ್ ಅಸ್ಲಂ ತಾಂಬೋಳೆ, ಸಿಬ್ಬಂದಿಗಳಾದ ಭರತ ಮದಭಾವೆ, ಕಿರಣ ಮಗ್ಗೆನ್ನವರ, ಸಂಧೀಪ ಕೋಥಳಿ, ಸುರಜ ನರವಾಡೆ, ಸುನೀಲ ದಿವಟೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 