ಸಂತ್ರಸ್ತರಿಗೆ ತಾತ್ಕಾಲಿಕ ಶೆಡಗಳ ಹಕ್ಕು ಪತ್ರ ವಿತರಣೆ
ಲೋಕದರ್ಶನ ವರದಿ
ರಾಮದುರ್ಗ 10: ನೆರೆ ಪ್ರವಾಹದಿಂದಾ ನಿರಾಶ್ರಿತರಾದ ಸಂತ್ರಸ್ತರಿಗೆ ಕೇವಲ ಹತ್ತು ತಿಂಗಳಲ್ಲಿ ಸೂಕ್ತ ಜಾಗ ನೋಡಿ ಸುಸಜ್ಜಿತ ಮನೆ ನಿಮರ್ಾಣ ಮಾಡಿಕೊಡಲಾಗುವುದು, ಅದಕ್ಕೆ ತಾಲೂಕ ಆಡಳತ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಸಂತ್ರಸ್ತರು ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕಿನ ಸಂಗಳ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕ ಪಂಚಾಯತ ಮತ್ತು ಗ್ರಾಮ ಪಂಚಾಯತಗಳ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗಾಗಿ ನಿಮರ್ಿಸಲಾದ ತಾಕ್ಕಾಲಿಕ ಶೆಡೆಗಳ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಎನ್ ಡಿ ಆರ್ ಎಫ್ ನಿಯಮದಂತೆ ನೆರೆ ಸಂತ್ರಸ್ತರಿಗೆ ರೂ. 3800 ನೀಡಬೇಕಾಗಿತ್ತು ಆದರೆ ತಾತ್ಕಾಲಿಕ ಪರಿಹಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರೂ. 10,000 ಹಣ ನೀಡಿ ಸರಕಾರ ನೆರ ಸಂತ್ರಸ್ತರೊಂದಿಗಿದೆ ಎಂಬುದನ್ನು ಸಾಬೀತು ಪಡಿಸಿ ಬಿದ್ದ ಮನೆಗಳ ನಿಮರ್ಾಣಕ್ಕೆ ಐದು ಲಕ್ಷ ಹಣ ಬಿಡುಗಡೆಗೊಳಿಸಿದ್ದಾರೆ ಎಂದು ನುಡಿದರು.
ಕೇಲವು ಕಡೆ ತಾಂತ್ರಿಕ ದೋಷದಿಂದ ಲಾಗಿನ್ ಬಂದಾಗಿ ಮನೆಗಳಿಗೆ ಹಣ ಜಮಾ ಆಗುತ್ತಿಲ,್ಲ ಶೀಘ್ರದಲ್ಲಿ ದೋಷ ನವಾರಣಿಸಲು ಕ್ರಮ ಕೈಕೊಳ್ಳಾಗುವದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯೆ ಶಿವಕ್ಕಾ ಬೆಳವಡಿ, ಗ್ರೆಡ್ 2 ತಹಶೀಲ್ದಾರ ಸೋಮಶೇಖರ ತಂಗೊಳ್ಳಿ, ಶಿರಸ್ತೆದಾರ ಆರ್ ಎಮ್ ಹಿರೇಮನಿ, ಗ್ರಾಮ ಲೆಕ್ಕಾಧಿಕಾರಿ ಯಲ್ಲಪ್ಪ ವಿಭೂತಿ, ತಾಪಂ ಸದಸ್ಯೆ ಕಾಶವ್ವ ಕಂಕೈಟ್ಟಿ, ಗ್ರಾಮ ಪಂಚಾಯತ ಉಪಾಧ್ಯಕ್ಷ ಯಲ್ಲಪ್ಪ ಹಂಪಿಹೋಳಿ ಸದಸ್ಯರಾದ ಅಬ್ದುಲ್ ಅತ್ತಾರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ನಿದರ್ೇಶಕರಾದ ಸಿದ್ದಪ್ಪ ಯಡಹಳ್ಳಿ ಹಾಗೂ ಗ್ರಾಮಸ್ಥರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 