ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಈರಣ್ಣ ಕಡಾಡಿ ಭೂಮಿ ಪೂಜೆ

Iranna Kadadi performs Bhoomi Puja for the construction of the community hall

ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಈರಣ್ಣ ಕಡಾಡಿ ಭೂಮಿ ಪೂಜೆ

ಮೂಡಲಗಿ, 08 : ಆಧುನಿಕ ಜಗತ್ತಿನಲ್ಲಿ ಮದುವೆಗಳು ಆಯಾ ಕುಟುಂಬದ ಪ್ರತಿಷ್ಠೆಯ ಮಾನದಂಡಗಳಾಗಿದ್ದು, ಪ್ರತಿಷ್ಠೆಗಾಗಿ ಜೀವನದಲ್ಲಿ ಅತಿ ಹೆಚ್ಚು ಖರ್ಚು ಮದುವೆಗಾಗಿ ಮಾಡುತ್ತಿದ್ದಾರೆ. ಇಂತಹ ಪ್ರತಿಷ್ಠೆಯ ಖರ್ಚುಗಳಿಗೆ ಕಡಿವಾಣ ಹಾಕಲು ಆಯಾ ಗ್ರಾಮಗಳಲ್ಲಿ ನಿರ್ಮಾಣವಾಗುವ ಸಮುದಾಯ ಭವನಗಳು ನೆರವಾಗಲಿದ್ದು ಶಿವಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುವ ಸಮುದಾಯ ಭವನವನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.ರವಿವಾರದಂದು ಸಂಸದರ ಆದರ್ಶ ಗ್ರಾಮವಾದ ತಾಲ್ಲೂಕಿನ ಶಿವಾಪೂರ (ಹ) ಗ್ರಾಮದ  ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಶಿವಾಪೂರ (ಹ) ಗ್ರಾಮದಲ್ಲಿ ಈಗಾಗಲೇ ಕಾಂಕ್ರೆಟ್ ರಸ್ತೆಗಳು,  ದುರ್ಗಾದೇವಿ ಸಮುದಾಯ ಭವನ, ಬಸ್ ಪ್ರಯಾಣಿಕರ ತಂಗುದಾಣ, ಶಾಲೆಗಳಿಗೆ ಪೀಠೋಪಕರಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದ್ದು, ಈಗ. ಅಡವಿಸಿದ್ದೇಶ್ವರ ಮಠದ ಸಮುದಾಯ ಭವನ ಹೀಗೆ ಅನೇಕ ಕಾಮಗಾರಿಗಳನ್ನು ಕೈಗೊಂಡು ಶಿವಾಪೂರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಅಡೆತಡೆಗಳನ್ನು ದಾಟಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ ಎಂದರಲ್ಲದೇ ಸಂಸದರ ಆದರ್ಶ ಗ್ರಾಮ ಯೋಜನೆ ಯಶಸ್ವಿಯಾಗಬೇಕಾದರೆ ಗ್ರಾಮದ ಜನರೆಲ್ಲಾ ಒಗ್ಗಟ್ಟಿನಿಂದ ಈ ಕಾರ್ಯಕ್ಕೆ ಕೈ ಜೋಡಿಸಿಬೇಕೆಂದು ಗ್ರಾಮಸ್ಥರಲ್ಲಿ ವಿನಂತಿಸಿದರು. 

ಶಿವಾಪೂರ (ಹ) ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗುವುದರಿಂದ ಮುಂಬರುವ ದಿನಗಳಲ್ಲಿ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಜನರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣವಾಗಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಎಂದರಲ್ಲದೇ ಮುಂಬರುವ ದಿನಗಳಲ್ಲಿ ಕೂಡಾ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ತಾವೆಲ್ಲ ಸಹಕಾರ ನೀಡಬೇಕೆಂದು ಕೋರಿದರು.  

ಶಿವಾಪೂರ(ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಡವಿಸಿದ್ದರಾಮ ಶ್ರೀಗಳು ಮಾತನಾಡಿ, ಶಿವಾಪೂರ ಗ್ರಾಮಕ್ಕೆ ಸಂಸದರು ಹೆಚ್ಚಿನ ಮೂತುವರ್ಜಿ ವಹಿಸುತ್ತಿರುವುದು ಶ್ಲಾಘಿಸಿದರು. ಈ ಹಿಂದೆ ಇರುವ ಅನೇಕ ರಾಜ್ಯಸಭಾ ಸದಸ್ಯರಿಂದ ಅರಭಾವಿ ಕ್ಷೇತ್ರದಲ್ಲಿ ಅನುದಾನ ಬಂದಿಲ್ಲ ಈಗಿನ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಮ್ಮ ಅನುದಾನದಲ್ಲಿ ಅರಭಾವಿ ಕ್ಷೇತ್ರದಲ್ಲಿ ಬಸ್ ನಿಲ್ದಾಣ, ಸಮುದಾಯ ಭವನ, ಶಾಲಾ ಕಾಲೇಜಗಳಿಗೆ ಮೂಲಭೂತ ಸೌಲಭ್ಯ, ದೇವಸ್ಥಾನಗಳ ಅಭಿವೃದ್ಧಿ, ರಕ್ಷಣಾ ಗೋಡೆ, ಜಿಮ್, ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂದು  ಸಂಸದರ ಕಾರ್ಯಗಳನ್ನು ಶ್ರೀಗಳು ಸ್ಮರಿಸಿದರು. 

ಈ ಸಮಯದಲ್ಲಿ ಶಿವನಗೌಡ ಪಾಟೀಲ, ಈಶ್ವರ ಬೆಳಗಲಿ, ಶಂಕರಗೌಡ ಪಾಟೀಲ,  ಶಿವಬಸು ಜುಂಜರವಾಡ. ಕೆಂಪಣ್ಣ ಮೂಧೋಳ, ಪ್ರಕಾಶ ಮಾದರ ಉಮೇಶ ಮುಧೋಳ, ಸತೀಶ ಜುಂಜರವಾಡ, ಬಸವರಾಜ ಸಾಯನ್ನವರ, ಮಲ್ಲಪ್ಪ ಜುಂಜರವಾಡ, ಚನ್ನಬಸು ಬೆಳಗಲಿ, ರೇವಪ್ಪ ಪಾಟೀಲ, ಅಡಿವೇಪ್ಪ ಗಿರೆಣ್ಣವರ, ಬಸಪ್ಪ ಶಿಳನ್ನವರ,  ಪರ​‍್ಪ ಗಿರೆಣ್ಣವರ,  ದುರ್ಗಪ್ಪ ಮೇತ್ರಿ, ಚನ್ನಮಲ್ಲಪ್ಪ ಕುಡಚಿ, ಈರಯ್ಯ ಹಿರೇಮಠ, ಶಿವನಪ್ಪ ರಡರಟ್ಟಿ, ಬಾಳಗೌಡ ಪಾಟೀಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕಾರ್ಯಕರ್ತರು ಉಪಸ್ಥಿತರಿದ್ದರು.