ಕಾಗವಾಡ ಪೊಲೀಸರಿಂದ ಅಂತರರಾಜ್ಯ ಬೈಕ್ ಕಳ್ಳನ ಬಂಧನ..!

ಕಾಗವಾಡ ಪೊಲೀಸರಿಂದ ಅಂತರರಾಜ್ಯ ಬೈಕ್ ಕಳ್ಳನ ಬಂಧನ..! Interstate bike thief arrested by Kagawad police..!

ಲೋಕದರ್ಶನ ವರದಿ 

ಕಾಗವಾಡ   16: ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರವೀಣ ಅಶೋಕ ಹೇಮಗಿರೆ ಇವರು ತಮ್ಮ ಬೈಕ್ ಕಳುವಾದ ಬಗ್ಗೆ ನೀಡಿದ ದೂರಿನನ್ವಯ ಕಾಗವಾಡ ಪೋಲಿಸರು ಮಲ್ಹಾರವಾಡಿ- ಮಂಗಸೂಳಿ ಗ್ರಾಮದ ರಂಜೀತ ಶ್ರೀರಂಗ ಲೋಖಂಡೆ (25) ಇತನಿಂದ ಮೂರು ಬೈಕ್‌ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ ಅಧೀಕ್ಷಕ ಕೆ.ರಾಮರಾಜನ, ಹೆಚ್ಚುವರಿ ಪೊಲೀಸ ಅಧೀಕ್ಷಕ ಆರಿ​‍್ಬ. ಬಸರಗಿ, ಅಥಣಿ ಡಿಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಅಥಣಿ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಮುಂದಾಳತ್ವದಲ್ಲಿ ಅಪರಾಧ ತಂಡವನ್ನು ರಚಿಸಿ, ಆರೋಪಿಯಿಂದ ಹಿರೋ ಎಚ್‌ಎಫ್ ಡಿಲೆಕ್ಸ ನಂ. ಕೆಎ-23ಇಇ-1868 (ಕಾಗವಾಡ ಪೋಲಿಸ್ ಠಾಣೆ) ಹಿರೋ ಹೊಂಡಾ ಸ್ಪೆಂಡರ ಪ್ಲಸ್ ನಂ. ಎಂಎಚ್‌-10ಬಿಕೆ-8350 (ಮಹಾರಾಷ್ಟ್ರದ ಮಿರಜ ಪೊಲೀಸ ಠಾಣೆ) ಮತ್ತು ಹೊಂಡಾ ಎಕ್ಟಿವಾ ನಂ. ಎಂಎಚ್‌-10ಡಿಂ-0952 (ಮಹಾರಾಷ್ಟ್ರದ ಕವಟೇಮಹಾಕಾಳ ಪೊಲೀಸ ಠಾಣೆ) ಹೀಗೆ ಒಟ್ಟು ಸುಮಾರು ರೂ. 1.25 ಲಕ್ಷ ಮೌಲ್ಯದ 3 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪರಾಧ ತಂಡದಲ್ಲಿ ಎಎಸ್‌ಐ ಎಸ್‌.ವ್ಹಿ. ಹಂಜಿ, ಪೋಲಿಸ್ ಸಿಬ್ಬಂದಿಗಳಾದ ಆರಿ​‍್ಪ. ಕಾಟೇಕರಿ, ಎಸ್‌.ಪಿ. ಮುಗ್ಗನ್ನವರ, ಎಂ.ಎಂ. ಜಂಬಗಿ, ಎಸ್‌.ಎಸ್‌. ನಂದಿವಾಲೆ ಎ.ಎಲ್‌. ಜಾಯಗೋಣೆ ವಿನೋಧ ಠಕ್ಕನ್ನವರ ಕಾರ್ಯ ನಿರ್ವಹಿಸಿದ್ದು, ಸದರಿ ಕಾರ್ಯವನ್ನು ಬೆಳಗಾವಿ ಎಸ್‌ಪಿ ಶ್ಲಾಘಿಸಿದ್ದಾರೆ.