ಕಾಗವಾಡ ಪೊಲೀಸರಿಂದ ಅಂತರರಾಜ್ಯ ಬೈಕ್ ಕಳ್ಳನ ಬಂಧನ..!
Interstate bike thief arrested by Kagawad police..!
ಲೋಕದರ್ಶನ ವರದಿ
ಕಾಗವಾಡ 16: ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರವೀಣ ಅಶೋಕ ಹೇಮಗಿರೆ ಇವರು ತಮ್ಮ ಬೈಕ್ ಕಳುವಾದ ಬಗ್ಗೆ ನೀಡಿದ ದೂರಿನನ್ವಯ ಕಾಗವಾಡ ಪೋಲಿಸರು ಮಲ್ಹಾರವಾಡಿ- ಮಂಗಸೂಳಿ ಗ್ರಾಮದ ರಂಜೀತ ಶ್ರೀರಂಗ ಲೋಖಂಡೆ (25) ಇತನಿಂದ ಮೂರು ಬೈಕ್ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ ಅಧೀಕ್ಷಕ ಕೆ.ರಾಮರಾಜನ, ಹೆಚ್ಚುವರಿ ಪೊಲೀಸ ಅಧೀಕ್ಷಕ ಆರಿ್ಬ. ಬಸರಗಿ, ಅಥಣಿ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ, ಅಥಣಿ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಮುಂದಾಳತ್ವದಲ್ಲಿ ಅಪರಾಧ ತಂಡವನ್ನು ರಚಿಸಿ, ಆರೋಪಿಯಿಂದ ಹಿರೋ ಎಚ್ಎಫ್ ಡಿಲೆಕ್ಸ ನಂ. ಕೆಎ-23ಇಇ-1868 (ಕಾಗವಾಡ ಪೋಲಿಸ್ ಠಾಣೆ) ಹಿರೋ ಹೊಂಡಾ ಸ್ಪೆಂಡರ ಪ್ಲಸ್ ನಂ. ಎಂಎಚ್-10ಬಿಕೆ-8350 (ಮಹಾರಾಷ್ಟ್ರದ ಮಿರಜ ಪೊಲೀಸ ಠಾಣೆ) ಮತ್ತು ಹೊಂಡಾ ಎಕ್ಟಿವಾ ನಂ. ಎಂಎಚ್-10ಡಿಂ-0952 (ಮಹಾರಾಷ್ಟ್ರದ ಕವಟೇಮಹಾಕಾಳ ಪೊಲೀಸ ಠಾಣೆ) ಹೀಗೆ ಒಟ್ಟು ಸುಮಾರು ರೂ. 1.25 ಲಕ್ಷ ಮೌಲ್ಯದ 3 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪರಾಧ ತಂಡದಲ್ಲಿ ಎಎಸ್ಐ ಎಸ್.ವ್ಹಿ. ಹಂಜಿ, ಪೋಲಿಸ್ ಸಿಬ್ಬಂದಿಗಳಾದ ಆರಿ್ಪ. ಕಾಟೇಕರಿ, ಎಸ್.ಪಿ. ಮುಗ್ಗನ್ನವರ, ಎಂ.ಎಂ. ಜಂಬಗಿ, ಎಸ್.ಎಸ್. ನಂದಿವಾಲೆ ಎ.ಎಲ್. ಜಾಯಗೋಣೆ ವಿನೋಧ ಠಕ್ಕನ್ನವರ ಕಾರ್ಯ ನಿರ್ವಹಿಸಿದ್ದು, ಸದರಿ ಕಾರ್ಯವನ್ನು ಬೆಳಗಾವಿ ಎಸ್ಪಿ ಶ್ಲಾಘಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 