ಭಯೋತ್ಪಾದನೆ ನಿಗ್ರಹಿಸಲು ಭಾರತಕ್ಕೆ ವಿಶ್ವದ ಸಹಕಾರವಿದೆ : ರಾಜನಾಥ್ ಸಿಂಗ್
ನವದೆಹಲಿ, ಫೆ 28 : ಭಯೋತ್ಪಾದನೆಯನ್ನು ನಿಗ್ರಹಿಸುವ ಭಾರತದ ಕಾರ್ಯಕ್ಕ ಸಹಕಾರ ನೀಡಲು ವಿಶ್ವ ಬದ್ಧವಾಗಿದ್ದು, ಉಗ್ರ ಸಂಘಟನೆಗಳ ಮುಖಂಡರನ್ನು ನ್ಯಾಯದ ಪರಿಧಿಗೆ ತರುವಂತೆ ಪಾಕಿಸ್ತಾನದಂತಹ ದೇಶಗಳನ್ನು ಒತ್ತಾಯಿಸಲು ಹೆಗಲಿಗೆ ಹೆಗಲು ನೀಡಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
ಸಾಮೂಹಿಕ ರಾಜತಾಂತ್ರಿಕತೆ ಮತ್ತು ಆರ್ಥಿಕ ಒತ್ತಡದಿಂದ ಇತ್ತೀಚೆಗೆ ಪಾಕಿಸ್ತಾನದ ಮೇಲಾದ ಪರಿಣಾಮವನ್ನು ನಾವು ಗಮನಿಸಬಹುದು ಎಂದಿದ್ದಾರೆ.
ಏರ್ ಪವರ್ ಸ್ಟಡೀಸ್ ಸೆಂಟರ್ ಆಯೋಜಿಸಿದ್ದ ಸೆಮಿನಾರ್ ಉದ್ದೇಶಿಸಿ ಅವರು ಮಾತನಾಡಿ, ಬಾಲಕೋಟ್ ವಾಯುದಾಳಿಯಲ್ಲಿ ಭಾಗವಹಿಸಿದ್ದ ಎಲ್ಲ ಧೀರ ಯೋಧರ ಬಗ್ಗೆ ಮೆಚ್ಚುಗೆ ಇದೆ. ಅದರಲ್ಲೂ ವಾಯುಸೇನೆಯ ಯೋಧರ ಯೋಜನೆ, ನಿರ್ವಹಣೆ ಶ್ಲಾಘನೀಯ ಎಂದರು.
“ಹಫೀಜ್ ಸಯೀದ್ ನಂತಹ ಗಣ್ಯಾತಿಗಣ್ಯ ಆತಿಥ್ಯ ಸ್ವೀಕರಿಸುತ್ತಿದ್ದ ಉಗ್ರರು ಇದೀಗ ಕಂಬಿ ಹಿಂದೆ ಇದ್ದಾರೆ. ಆದಾಗ್ಯೂ ಪಾಕಿಸ್ತಾನ ಹಳೆಯ ಚಾಳಿ ಬಿಟ್ಟಿಲ್ಲ ಪ್ರಾಕ್ಸಿ ದಾಳಿಗೆ ಪ್ರಚೋದನೆ ನೀಡುತ್ತಲೇ ಇದೆ” ಎಂದರು.
ಭಾರತೀಯ ಸೇನೆ ಕೈಗೊಂಡ ಬಾಲಕೋಟ್ ದಾಳಿ ಕಾರ್ಯಾಚರಣೆಯ ಪರಿಣಾಮ, ದೇಶದ ವಿರುದ್ಧ ಅತ್ಯಂತ ಕಡಿಮೆ ಖರ್ಚಿನಲ್ಲಿ ಭಯೋತ್ಪಾದನೆಯ ಉದ್ಯೋಗ ಸೃಷ್ಟಿ ನಿಂತಿದೆ. ಗಡಿ ನಿಯಂತ್ರಿ ರೇಖೆಯ ಬಳಿಯಿದ್ದ ಉಗ್ರರು, ಉಗ್ರರ ಮೂಲಸೌಕರ್ಯಗಳು ,ಮತ್ತು ಉಗ್ರ ತರಬೇತಿ ಸೌಲಭ್ಯಗಳ ನಾಶವಾಗಿದೆ ಎಂದರು.
ರಕ್ಷಣಾ ಪಡೆಗಳ ರಚನಾತ್ಮಕ ಬದಲಾವಣೆಗಳನ್ನು ಬಗ್ಗೆ ವಿವರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರಕ್ಕೆ ಎದುರಾಗುವ ಬೆದರಿಕೆ ನಿಭಾವಣೆಯ ಉದ್ದೇಶದಿಂದ ಕೆಲವು ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಇದರ ಕಾರ್ಯಸಾಮರ್ಥ್ಯವನ್ನು ಹೊಂದಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಎಂದು ಹೇಳಿದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 