ರಾಜ್ಯಾದ್ಯಂತ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ
Indefinite strike by civic workers across the state
ಮಹಾಲಿಂಗಪುರ 03; ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನಿರ್ಧೇಶನದಂತೆ ಡಿ.4 ರಂದು ಲೇಖನಿ ಸ್ಥಗಿತ, ಮತ್ತು ಡಿ.5 ರಂದು ಮುನ್ಸಿಪಾಲ್ಟಿಯ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೋಳಿಸಿ ಅನಿರ್ಧಿಷ್ಟ ಮುಷ್ಕರ ಆರಂಬಿಸುವುದಾಗಿ ಪೌರ ಕಾರ್ಮಿಕರ ಸಂಘದ ಸ್ಥಳೀಯ ಅಧ್ಯಕ್ಷ ಎಂ.ಕೆ ದಳವಾಯಿ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂದರ್ಭದದಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ನಡೆಯುವ ಮುಷ್ಕರದಲ್ಲಿ ಸರ್ಕಾರದ ತಾರತಮ್ಮ ಮತ್ತು ಸ್ಪಂದನೆ ಇಲ್ಲದೆ ಇರುವುದರಿಂದ ಮತ್ತೆ ಅನಿರ್ಧಿಷ್ಟ ಮುಷ್ಕರಕೆಕ ಅನಿಯಾಗುತ್ತಿದ್ದೇವೆ, ನಮ್ಮ ಕರ್ನಾಟಕ ರಾಜ್ಯ ಪೌರನೌರಕರ ಸಂಘವು ರಾಜ್ಯಾದ್ಯಂತ ಎಲ್ಲ ಮುನ್ಸಿಪಾಲ್ಟಿಗಳ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗೀತಗಳಿಸುವ ತಿರ್ಮಾಣ ಕೈಗೊಂಡಿದ್ದು, ಸರ್ಕಾರ ಮತ್ತು ಸಂಬಂದಿಸಿದ ಇಲಾಖೆಗೆ ತಿಳಿಸಲಾಗಿದೆ, ಮಹಾಲಿಂಗಪುರ ಪುರಸಭೆಯು ಕೂಡಾ ಡಿ.4-5 ರಿಂದ ಅನಿರ್ಧಿಷ್ಟ ಮುಷ್ಕರ ಕೈಗೋಳ್ಳಲಾಗಿದೆ ಎಂದರು.
ನೌಕರ ಸಂಘದ ಬೇಡಿಕೆಗಳು : ರಾಜ್ಯದ ಎಲ್ಲಾ ನಗರ ಸ್ಥಳೀಯ ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಿ ಜ್ಯೋತಿ ಸಂಜೀವಿನಿ ಕೆ.ಜಿ.ಐ.ಸಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. 2022-23 ರಲ್ಲಿ ನೇಮಕಾರಿ ಹೊಂದಿರುವ ಪೌರ ಕಾರ್ಮಿಕರಿಗೆ ಎಸ್.ಎಫ.ಸಿ ಅನುದಾನದಲ್ಲಿ ವೇತನ ನೀಡುವುದು. ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ, ಕ್ಲೀನರ್ಸ, ಗಾರ್ಡಿನರ್,ಸ್ಯಾನಿಟರಿ ಸುಪ್ರವೈಜರ, ಸುಪ್ರವೈಜರ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೇಗಳಿಂದ ನೇರ ಪಾವತಿಗೆ ಒಳಪಡಿಸುವುದು. ರವಿ ಹಲಸಪ್ಪಗೋಳ, ಎಂ.ಎಂ ಮುಗಳಕೋಡ, ಪಿ.ವಾಯ್ ಸೊನ್ನದ, ಎಸ್.ಎನ್.ಪಾಟೀಲ, ಚಂದ್ರು ಚಿತ್ತರಗಿ, ರಾಜೇಶ್ವರಿ ಸೋರಗಾಂವಿ, ಮನೋಜ ಹಂಚಾಟೆ, ಸಿ.ಎಸ್ ಮಠಪತಿ, ರಾಮು ಮಾಂಗ, ಮಹಾಲಿಂಗ ಮಾಂಗ, ಎಸ್.ಜಿ ಕತ್ತಿ. ವಿಕ್ರಮ ಹವಾಲ್ದಾರ ಸೇರಿದಂತೆ ಪೌರ ನೌಕರರು, ಕಾರ್ಮಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 