ಕರಾವಳಿಯಲ್ಲಿ ಹೆಚ್ಚಿದ ರಭಸದ ಗಾಳಿ ಮಳೆ
Increased gusty winds and rain along the coast
ಕಾರವಾರ 02: ಉತ್ತರ ಕನ್ನಡ ಕರಾವಳಿಯಲ್ಲಿ ರಭಸದ ಗಾಳಿ ಮಳೆ ಹೆಚ್ಚಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿ ಗಳಲ್ಲಿ ನೆಲ ಮುಗಿಲು ಒಂದಾಗಿಸುವಂತೆ ಮಳೆ ಸುರಿದಿದೆ.
ಮುಂಡಗೋಡ ಹೊರತು ಪಡಿಸಿ ಎಲ್ಲೆಡೆ ಭರ್ಜರಿ ಮಳೆಯಾಗಿದೆ . ಹಳಿಯಾಳ , ಮುಂಡಗೋಡದಲ್ಲಿ ಕೃಷಿಕರಿಗೆ ಬೇಕಾಗುವಷ್ಟು ಮಳೆ ಸುರಿದಿದೆದಾಂಡೇಲಿಯಲ್ಲಿ ಹೆಚ್ಚು ಮಳೆಯಾಗಿದೆ. ಶಿರಸಿ, ಸಿದ್ದಾಪುರದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಜನ ಜೀವನ ಎಂದಿನಂತೆ ಇತ್ತು . ಕಾರವಾರ, ಅಂಕೋಲಾದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಹೊನ್ನಾವರ ಭಟ್ಕಳದಲ್ಲಿ ಸಹನೀಯ ಮಳೆ ಇದ್ದರೆ, ಕುಮಟಾ ದಿಂದ ಕಾರವಾರದ ತನಕ ಹೆಚ್ಚು ಮಳೆ ಸುರಿದಿದೆ. ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹ ಸೃಷ್ಟಿ ಆಗುವ ಮಟ್ಟದಲ್ಲಿ ಮಳೆ ಬಿದ್ದಿಲ್ಲ . ಡ್ಯಾಂ ಭರ್ತಿಯಾಗದಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಡ್ಯಾಂ ಭರ್ತಿಯಾಗಿ, ನದಿ ದಂಡೆಯ ಗ್ರಾಮದಲ್ಲಿ ಹಠಾತ್ ಪ್ರವಾಹ ತಪ್ಪಿಸಲು ಕದ್ರಾ, ಸುಫಾ, ಕೊಡಸಳ್ಳಿ, ಗೇರುಸೊಪ್ಪ ಡ್ಯಾಂ ಭರ್ತಿಗೆ ಎರಡು ಮೀಟರ್ ಇರುವಾಗಲೇ ನದಿಗೆ ನೀರು ಬಿಟ್ಟು, ಜಲಾಶಯಗಳಿಂದಾಗುವ ಕೃತಕ ನೆರೆ ತಪ್ಪಿಸಲಾಗಿದೆ.
ಕಳ ವರ್ಷದಿಂದ ಈ ಕ್ರಮ ಅನುಸರಿಸಿ, ಜನರ ಆಸ್ತಿಪಾಸ್ತಿ ರಕ್ಷಣೆ ಮಾಡಲಾಗಿದೆ.ಹವಾಮಾನ ಇಲಾಖೆಯ ಸೂಚನೆಯಂತೆ ಇನ್ನೂ ಕೆಲದ ದಿನ ಮಳೆ ಮುಂದುವರಿಯಲಿದೆ.ಮಳೆ ವಿವರ:ಉತ್ತರ ಕನ್ನಡಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 52.9 ಮಿಮೀ, ಭಟ್ಕಳದಲ್ಲಿ 32.4 ,ಹಳಿಯಾಳ 10.4, ಹೊನ್ನಾವರ 38.6 ,ಕಾರವಾರ 53.1 ,ಕುಮಟಾ 40.1, ಮುಂಡಗೋಡ 6, ಸಿದ್ದಾಪುರ 54.1, ಶಿರಸಿ 50.3, ಸೂಪಾ 67.4, ಯಲ್ಲಾಪುರ 21.5, ದಾಂಡೇಲಿಯಲ್ಲಿ 25.5 ಮಿಲಿ ಮೀಟರ್ ಮಳೆ ಸುರಿದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 