ಮತ್ತೆ ಹೆಚ್ಚಿದ ಕೃಷ್ಣೆಯ ಅಬ್ಬರ: ಭೀತಿಯಲ್ಲಿ ನದಿ ತೀರದ ಜನತೆ
,ರಬಕವಿ-ಬನಹಟ್ಟಿ: ಮಹಾರಾಷ್ಟ್ರ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣೆಯ ಭೋರ್ಗರೆಯುವ ಅಬ್ಬರ ಹೆಚ್ಚುತ್ತಿರುವುದರಿಂದ ಈಗಾಗಲೇ ಕೃಷ್ಣೆಯ ಅವಕೃಪೆಯಿಂದಾಗಿ ಸಾಕಷ್ಟು ಹಾನಿ ಅನುಭವಿಸಿದ ನದಿಪಾತ್ರದ ಸುತ್ತಲಿನ ಗ್ರಾಮಗಳ ಜನತೆ ಮತ್ತೆ ಕಂಗಾಲಾಗಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನ ಬಹುತೇಕ ಗ್ರಾಮಗಳು ಕೃಷ್ಣೆಯ ಅಟ್ಟಹಾಸದೆದುರು ಈಗಾಗಲೇ ಕಂಗಾಲಾಗಿದ್ದು,ಮತ್ತೊಮ್ಮೆ ಪ್ರವಾಹದ ಲಕ್ಷಣಗಳು ಗೋಚರಿಸುತ್ತಿರುದರಿಂದ ಮತ್ತು ಸದ್ಯ ನದಿ ಪಾತ್ರದಿಂದ ಹೊರಬಂದು ಪಕ್ಕದ ಜಮೀನುಗಳಲ್ಲಿ ಕೃಷ್ಣೆಯ ನೀರು ಹರಿಯುತ್ತಿರುವುದರಿಂದ ತಮ್ಮ ಭವಿತವ್ಯದ ಬದುಕು ಹೇಗಿದೆಯೋ ಎಂಬ ಆತಂಕದಲ್ಲಿದ್ದಾರೆ.ತಾಲೂಕಿನ ರಬಕವಿ, ಮದನಮಟ್ಟಿ, ಹಳಿಂಗಳಿ, ತಮದಡ್ಡಿ,ಆಸ್ಕಿ,ಆಸಂಗಿ, ಕುಲಹಳ್ಳಿ ಮತ್ತು ಹಿಪ್ಪರಗಿ ಗ್ರಾಮಸ್ಥರು ಎಲ್ಲಿ ಮತ್ತೆ ಕೃಷ್ಣೆ ಕೋಪಗೊಂಡು ಅನಾಹುತ ಸೃಷ್ಠಿಸುವಳೋ ಎಂದು ಭಯಭೀತರಾಗಿದ್ದು,ಕಳೆದ ತಿಂಗಳ ದುರ್ಘಟನೆ ಮರೆಯುತ್ತಿರುವಾಗಲೇ ಮತ್ತದೇ ಭಯ ಎಲ್ಲರಲ್ಲಿ ಆವರಿಸಿದೆ.
ರಬಕವಿ-ಬನಹಟ್ಟಿಯಲ್ಲಿ ತಾಲೂಕಿನ ಎಲ್ಲೆಡೆ ಭಾನುವಾರ ರಾತ್ರಿಯಿಡೀ ಮಳೆ ಸುರಿದಿದ್ದು,ಮನೆ ಕುಸಿತ ,ಸಿಡಿಲಿನ ಪ್ರಕೋಪಗಳಂತ ಯಾವುದೇ ದುರ್ಘಟನೆ ಸಂಭವಿಸಿಲ್ಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 