ವಿದ್ಯಾರ್ಥಿ ಸಂಘದ ಉದ್ಘಾಟನೆ

ವಿದ್ಯಾರ್ಥಿ ಸಂಘದ ಉದ್ಘಾಟನೆ Inauguration of the Student Union

ಲೋಕದರ್ಶನ ವರದಿ 

  

  

ವಿದ್ಯಾರ್ಥಿ ಸಂಘದ ಉದ್ಘಾಟನೆ 

  ಧಾರವಾಡ 18: ಜೆ.ಎಸ್‌.ಎಸ್‌.   ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನೆರವೇರಿದ 2025-26 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ   ಈರೇಶ ಅಂಚಟಗೇರಿ, ಗೌರವಾನ್ವಿತ ಮಾಜಿ ಮಹಾಪೌರರು ಹಾಗೂ ಸಭಾ ನಾಯಕರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರು ಮಾತನಾಡಿ, ಒಬ್ಬ ಉತ್ತಮ ಶಿಕ್ಷಕರ ಹೇಗೆ ಇರಬೇಕು ಎಂದು ಅಭಿಪ್ರೇರಣೆ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಡಾ. ಸೂರಜ್ ಜೈನ್ ಇವರು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರಗಳು ಮತ್ತು ಒಬ್ಬ ಒಳ್ಳೆಯ ಶಿಕ್ಷಕನ ಅವಶ್ಯಕತೆ ಎಷ್ಟು ಇದೆ ಎಂಬುದನ್ನು ಅಚ್ಚುಕಟ್ಟಾಗಿ ವಿವರಿಸಿದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಸುನೀತಾ ಪಾಟೀಲ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಆಶಾ ಭೈರಿ ವಿದ್ಯಾರ್ಥಿ ಸಂಘವನ್ನು ಪರಿಚಯಿಸಿದರು. ಕು. ಕಾವೇರಿ ಹೊನ್ನತ್ತಿ ಪ್ರಾರ್ಥಿಸಿದರು. ಕು. ಪ್ರಜ್ವಲ ಪತ್ತಾರ ವಂದಿಸಿದರು. ಕು. ಭಾರತಿ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು.