ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ಉದ್ಘಾಟನೆ
Inauguration of new Mahadwara of Lakshmidevi Temple
ರಾಯಬಾಗ 02: ಒಳ್ಳೆಯ ಕೆಲಸ ಅಷ್ಟೇ ಮಾಡಿ, ಫಲಾಫೇಕ್ಷೆಯನ್ನು ಆ ಭಗವಂತನಿಗೆ ಬಿಟ್ಟುಬಿಡಬೇಕು, ಆಗ ಮಾತ್ರ ಜೀವನದಲ್ಲಿ ಸುಖ ಶಾಂತಿಯನ್ನು ಪಡೆಯಲು ಸಾಧ್ಯವೇಂದು ಕವಲಗುಡ್ಡ (ಹನುಮಾಪೂರ) ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಗುರುವಾರ ಸಾಯಂಕಾಲ ರಾಯಬಾಗ ರೈಲ್ವೇ ಸ್ಟೇಷನ್ದ (ಖೈರವಾಡಿ) ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ವಾಸ್ತು ಪೂಜಾ ಹಾಗೂ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮೊಬೈಲ್, ಟಿವ್ಹಿಗಳು ಬಂದಾಗಿನಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿವೆ. ಇದರಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ, ಸಮಾಜದಲ್ಲಿ ಕುಟುಂಬದಲ್ಲಿ, ಸಮಾಜದಲ್ಲಿ ಅಶಾಂತಿ ಹೆಚ್ಚಿದೆ. ಎಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ ಅಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ಅಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ. ದೇವರಲ್ಲಿ ಶುದ್ಧ ಶ್ರದ್ಧಾಭಕ್ತಿ, ಭಾವಗಳಿಂದ ನಡೆದುಕೊಳ್ಳಬೇಕು ಎಂದರು.
ವಕೀಲ ಆರ್.ಎಚ್.ಗೊಂಡೆ, ಮರೇಪ್ಪ ದಿಪಾಳೆ, ಗುಣಪಾಲ ಬಡೋರೆ, ಸಂಜು ಬಾವಚೆ, ರಮೇಶ ಕುಂಬಾರ, ಅಣ್ಣಪ್ಪ ಹೊಸಕೋಟೆ, ಸಂತೋಷ ತೆರದಾಳೆ, ತಾನಾಜಿ ದಿಪಾಳೆ, ಮಹಾವೀರ ಶೆಟ್ಟಿ, ಸಂತೋಷ ಶೆಟ್ಟಿ, ಬೀರ್ಪ ಗೊಂಡೆ, ಹಾಲಪ್ಪ ಅಳಗವಾಡಿ, ಕುಮಾರ ಹೊಸಕೋಟೆ, ಬೀರಾ ಗೆನಾನಿ, ಅಣ್ಣಪ್ಪ ಮುಧೋಳೆ, ಕಲ್ಲಪ್ಪ ನಾಗರಾಳೆ ಸೇರಿ ಅನೇಕ ಭಕ್ತಾದಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 