ಕಲಾವಿದರು ಒಗ್ಗಟಾಗಿ ನಿಂತರೆ ಚಿತ್ರೋದ್ಯಮ ಉಳಿಯಲಿದೆ: ನಟ ಜಗ್ಗೇಶ್
ಬೆಂಗಳೂರು, ಮೇ18,ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ , ಕಿರಿಯರು ಪರಸ್ಪರ ಒಗ್ಗಟ್ಟಾದರೇ ಮಾತ್ರ ಚಿತ್ರೋದ್ಯಮ ಉಳಿಯಲು ಸಾಧ್ಯ ಎಂದು ನವರಸ ನಾಯಕ ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪರಭಾಷೆ ನಿರ್ಮಾಪಕರು ನಿರ್ದೇಶಕರಿಗೆ ಬಿಲ್ಡ್ ಅಪ್ ಕೊಟ್ಟು ಕರ್ನಾಟಕ ಎಂದರೆ ಇಷ್ಟೇ ಜನ ಎಂದು ಮುದ್ರೆ ಹಾಕಿ ಡಬ್ಬಿಂಗ್ ಸಿನಿಮಾ, ಡಬ್ಬಿಂಗ್ ರೈಟ್ಸ್, ಪಡೆದು ಕೆಲವರು ಬಲಿಷ್ಟರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂತವರ ಕಪಿಮುಷ್ಟಿಯಿಂದ ಉದ್ಯಮ ಹೊರಬಂದರೆ! ಹೊಸ ನಿರ್ಮಾಪಕರು ನಿರ್ದೇಶಕರು, ನಟ, ನಟಿಯರು ಬೆಳೆದು ಕನ್ನಡ ಚಿತ್ರರಂಗದ ಮುಂದಿನ ಆಸ್ತಿಯಾಗಲಿದ್ದಾರೆ ಎಂದರು. ಕಲಾಭಿಮಾನಿಗಳ ಚಪ್ಪಾಳೆ ನಟ-ನಟಿ ಯನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹೀಗಾಗಿ ಕಲಾವಿದರನ್ನು ಬೆಳೆಸಿದ ನಿರ್ಮಾಪಕರು ಟಿವಿ ಮುಂದೆ,ಒಂಟಿ ಭೀಕ್ಷುಕನನ್ನಾಗಿ ಮಾಡಬೇಡಿ ಎಂದರು. ಈಗ ಹಿರಿಯರೆಲ್ಲರೂ ಒಂದಾಗದಿದ್ದರೇ, ಪರ ಭಾಷೆಯ ಚಿತ್ರಗಳು ರಾಜನಂತೆ ರಾಜ್ಯವನ್ನು ಆಕ್ರಮಿಸಿ, ನಮ್ಮ ಭಾಷೆ ಅನಾದರಣೆಗೆ ಒಳಗಾಗುವು ಖಚಿತ ನಮ್ಮ ಚಿತ್ರರಂಗಕ್ಕೆ ನಮ್ಮವರೇ ಶತ್ರುಗಳಾಗುವುಉದ ಬೇಡ ಎಂದು ಜಗ್ಗೇಶ್ ಹೇಳಿದ್ದಾರೆ ಸಿನಿಮಾಗಾಗಿಯೇ ಬಾಳಿ ಬದುಕಿದ ಹಿರಿಯ, ಕಿರಿಯರು ಒಂದು ವೇದಿಕೆ ರಚಿಸಿ ನಿಸ್ವಾರ್ಥ ಯತ್ನ ಮಾಡಿದರೆ ಮಾತ್ರ ಉದ್ಯಮ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 