ಗುರುವಿನ ಕ್ರಪಾ ಆಶೀರ್ವಾದವಿದ್ದರೆ ಸಾವಿನ ನಂತರವೂ ಮನುಷ್ಯ ಬದುಕಿರುತ್ತಾನೆ : ಸಹಜಾನಂದ ಸ್ವಾಮೀಜಿಗಳು

ಮಾಧವಾನಂದ ಆಶ್ರಮದಲ್ಲಿ ದಿ. ಸಂಗಪ್ಪ ಕದ್ದಿಮನಿ ಪುಣ್ಯಸ್ಮರಣೆ ಕಾರ್ಯಕ್ರಮ 

ಮಹಾಲಿಂಗಪುರ 19: ಇಂಚಗೇರಿಯ ಸಂಪ್ರದಾಯ ಮತ್ತು ಮಾಧವಾನಂದ ಪ್ರಭುಗಳ ಮಾತನ್ನು ಉಳಿಸುವುದಕ್ಕಾಗಿ ತಮ್ಮ ಜೀವನದುದ್ದಕ್ಕೂ ಸಂಕಷ್ಟದ ಹಾದಿಯಲ್ಲಿಯೇ ನಡೆದುಕೊಂಡು ಕಡೆಗೊಂದು ದಿನ ಜನರ ಸಹಕಾರದಿಂದ ಇಲ್ಲಿನ ಗಿರಿಮಲ್ಲೇಶ್ವರ ಆಶ್ರಮ ಕಟ್ಟಿ ಗಿರಿಮಲ್ಲೇಶ್ವರ ಮತ್ತು ಮಾಧವಾನಂದರ ನಿತ್ಯ ಪೂಜೆ,ಭಜನೆ, ಆರತಿ ನಡೆಯುವುದಕ್ಕೆ ಕಾರಣವಾದವರೆ ದಿ. ಸಂಗಪ್ಪ ಕದ್ದಿಮನಿ ಮಹಾರಾಜರು ಇವರು ಮಾಧವಾನಂದ ಪ್ರಭುಜಿಯವರ ಪರಮ ಭಕ್ತರಾಗಿದ್ದರು.  ಅವರಿಗೆ ಗುರುವಿನ ಆಶೀರ್ವಾದ ಇದ್ದುದರಿಂದಲೇ ಇಂದು ಅವರ ಪುಣ್ಯರಾಧನೆ ನಡೆಯುವುದೇ ಸಾಕ್ಷಿ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ, ಪೂ, ಸಹಜಾನಂದ ಸ್ವಾಮಿಗಳು ಹೇಳಿದರು, 

ಸ್ಥಳೀಯ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಗಿರಿಮಲ್ಲೇಶ್ವರ ಮಹಾರಾಜರ ಸಂಘ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಹಾಗೂ ಅಧ್ಯಾತ್ಮ ಐಸಿರಿ ಶ್ರೀ ಸಂಗಪ್ಪ ಕದ್ದಿಮನಿ ಮಹಾರಾಜರ ಅನುಭಾವ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಿ.ಸಂಗಪ್ಪ ಕದ್ದಿಮನಿಯವರ 6 ನೇಯ ಪುಣ್ಯಸ್ಮರಣೆ ಸಪ್ತಾಹ ಹಾಗೂ ಸೇವಾ ಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಆ ದೇವರನ್ನು ಸ್ಮರೀಸಿ ನಿತ್ಯ ಪೂಜೆ ಮಾಡುವರಿಗೆ ಎಂದು ಕಷ್ಟ ಕಾರ​‍್ಪಣಯ ಬರುವುದಿಲ್ಲ, ಅಥವಾ ಎಷ್ಟೆ ಕಷ್ಟಗಳಿಂದ್ದರು ಒಂದು ದಿನ ಅವೇಲ್ಲವೂ ಮಾಯವಾಗಿ ಸಂತೋಷದ ಜೀವನ ಸಾಗಿಸುವಂತಾಗುತ್ತದೆ ಎಂಬುದಕ್ಕೆ ದಿ. ಕದ್ದಿಮನಿಯವರೆ ಸಾಕ್ಷಿ,ಯಾಗಿದ್ದಾರೆ ಎಂದರು  

ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾಥ ವ್ಯೆದ್ಯರಾದ ಡಾ ಎ ಆರ್ ಬೆಳಗಲಿ ಗಿರಿಮಲ್ಲೇಶ್ವರರು ಹಾಗೂ ಮಾಧವಾನಂದರನ್ನು ನಂಬಿದವರಿಗೆ ಎಂದು ಕೆಡುಕಾಗುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯೇ ಪ್ರತಿ ಶುಕ್ರವಾರ ಇಲ್ಲಿ ನಡೆಯವ ಸತ್ಸಂಗ ಕಾರ್ಯಕ್ರಮವೆ ಕಾರಣ,ಆದ್ದರಿಂದ ಪ್ರತಿಯೋಬ್ಬರು ತಮ್ಮ ಜೀವನದ ಒತ್ತಡ ಎಷ್ಟೆ ಇದ್ದರು ದಿನ ಸ್ವಲ್ಪ ಸಮಯವಾದರೂ ಆ ದೇವರ ಸ್ಮರಣೆ ಮಾಡಿ, ಆಧ್ಯಾತ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೋಳ್ಳಿ ಇದರಿಂದ ನಿಮ್ಮ ಜೀವನ ಒತ್ತಡವೆಲ್ಲ ಹೋಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದರು.  

ನಂತರ ಮಾತನಾಡಿದ ಖ್ಯಾತ ಹೃದಯರೋಗ ತಜ್ಞರಾದ ಡಾ ವಿಜಯ ಹಂಚಿನಾಳ ಬಗವಂತ ದ್ಯಾನ ಮಾಡಿದರೆ ಮನದಲ್ಲಿ ಕೆಟ್ಟ ವಿಚಾರಗಳು ಬಾರದೆ. ಒಳ್ಳೆಯ ವಿಚಾರಗಳು ಹೊರಬರುತ್ತವೆ,ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚುತ್ತದೆ. ಮಕ್ಕಳಿಗೆ ವಿದ್ಯಾರ್ಜನೆ ಜೋತೆಗೆ ಸಣ್ಣಂದಿನಿಂದಲೆ ಸಂಸ್ಕಾರ ಕಲಿಸಿಕೊಡಿ, ಬರೀ ಮೋಬೈಲ ಕೊಟ್ಟು ಮಕ್ಕಳನ್ನು ಹಾಳು ಮಾಡಬೇಡಿ, ಮಕ್ಕಳು ವಿದ್ಯೆಯಿಲ್ಲದಿದ್ದರು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬಲ್ಲರು ಆದರೆ ಸಂಸ್ಕಾರ ಇಲ್ಲದೆ ಬದುಕುವುದು ತುಂಬಾ ಕಷ್ಟವಾಗುತ್ತದೆ ಎಂದರು. 

ನಂತರ ಮಾತನಾಡಿದ ಕಂಕಣವಾಡಿಯ ಮಾರುತಿ ಶರಣರು ಶುದ್ದವಾದ ಬುದ್ದಿಗೆ ಬೃಹ್ಮ ಗೋಚರವಾಗುತ್ತಾನೆ ಹೊರತು ಅಶುದ್ದ ಬುದ್ದಿಗೆ ಅಲ್ಲ, ಇತ್ತಿಚೇಗೆ ಎಲ್ಲರೂ ಬರೀ ಬಟ್ಟೆಗಳನ್ನು ಶುದ್ದವಾಗಿ ಧರಿಸುತ್ತಾರೆ ಹೊರತು ಮನಸ್ಸನ್ನು ಶುದ್ದಗೋಳಿಸಲು ಯಾರು ಪ್ರಯತ್ನೀಸುತ್ತಿಲ್ಲ. ಜೀವನದಲ್ಲಿ ಬರೀ ಬಟ್ಟೆಮಾತ್ರ ಶುದ್ದವಾಗಿದ್ದರೆ ಸಾಲದು, ಮನಸ್ಸು ಶುದ್ದವಾಗಿರಬೇಕು,ಮನಸ್ಸು ಶುದ್ದವಾಗಿದ್ದರೆ ಮಾತ್ರ ಆ ಭಗವಂತ ದ್ಯಾನ ಮಾಡಲು ಬಯಸುತ್ತದೆ ಎಂದರು. 

ಇದಕ್ಕೂ ಮುನ್ನ ಪುರಸಭೆ ಅಧ್ಯಕ್ಷರಾದ ಶ್ರೀ ಯಲ್ಲಣ್ಣಗೌಡ ಪಾಟೀಲರು ಮತ್ತು ವೇದಿಕೆಯ ಮೇಲಿರುವ ಎಲ್ಲ ಗಣ್ಯಮಾನ್ಯರು ಸೇರಿ ದಿ.ಸಂಗಪ್ಪ ಕದ್ದಿಮನಿಯವರ ಭಾವಚಿತ್ರಕ್ಕೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವು ಮೂಲಕ 6 ವರ್ಷದ ಪುಣ್ಯಸ್ಮರಣೆ ಸಪ್ತಾಹ ಸಮಾರಂಭವನ್ನು ಉದ್ಘಾಟನೆ ಮಾಡಿದರು. 

ಪ್ರಶಸ್ತಿ ಪ್ರಧಾನ : ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಗಣ್ಯರಾದ ಬನಹಟ್ಟಿಯ ಪ್ರಭು ಕೋಪರ್ಡೇ, ಸಂಗಾನಟ್ಟಿಯ ಖನಿ ವಾದಕರಾದ ಯಮನಪ್ಪ ಗಾಡಿಕಾರ, ಮಹಾಲಿಂಗಪುರದ ಡಾ ಸಂಗಮೇಶ ಹಿಡಕಲ್, ಭಜನಾ ಕಲಾವಿದ ಶಂಕರ ನೀಲಾರಿ, ಗುತ್ತಿಗೆದಾರರದ ಹುಚ್ಛೆಶ ವಡ್ಡರ. ಇವರೆಲ್ಲರಿಗೂ ಸೇವಾ ಭೂಷಣ ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. 

ಇಂದಿನ ಕಾರ್ಯಕ್ರಮದಲ್ಲಿ ಸತ್ಯಪ್ಪ ಮಹಾರಾಜರು, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಹುಮಾಯಿನ್ ಸುತಾರ, ಎಸ್ ಆರ್ ಹಿಡಕಲ್, ಅರವಿಂದ ವಕೀಲರು, ಆನಂದ ದೇಸಾಯಿ ಮಾತನಾಡಿದರು.ಡಾ ಮಂಜುನಾಥ್ ಚನ್ನಾಳ, ಶ್ರೀಶೈಲ್ ಬಾಡನವರ, ಅಡಿವೆಪ್ಪ ಶಿರೋಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಈ ಸಂಧರ್ಭದಲ್ಲಿ ಆರ್ ಟಿ ಪಾಟೀಲ, ಮಹೇಶ ಆರಿ, ಮಹೇಶ ಮಣ್ಣಯ್ಯನವರಮಠ, ಹಣಮಂತ ನಾವಿ,ಅರವಿಂದ ಮಲಬಸರಿ ದುಂಡಪ್ಪ ಸಂತರು , ಡಾ ಮಹಾದೇವ ಕದ್ದಿಮನಿ, ಶ್ರೀಶೈಲಪ್ಪ ರೊಡ್ಡನ್ನವರ, ಮೈತ್ರಾವತಿ ಕದ್ದಿಮನಿ, ಬಾಬು ಜೇಡರ, ಡಾ.ಜಿ.ಎಂ ಮಗದುಮ್, ಡಾ ರಾಚಪ್ಪ ಚಿಮ್ಮಡ, ಚಂದ್ರ​‍ಪ್ಪ ಡೋಣಿ, ಗುರುಪಾದ ಉರಬಿನವರ,ಪ್ರಕಾಶ ಗೋಕಾಂವಿ, ಮನು ಅಂಬಿ, ಗೀರೀಶ ಶಿರೋಳ,ಗೀರೀಶ ಜಾಧವ, ಗುರು ಕದ್ದಿಮನಿ, ಗೌಡಪ್ಪಗೌಡ ಪಾಟೀಲ, ವಿಠ್ಠಲ ಸೂರನ್ನವರ, ಅರ್ಜುನ್ ಸಣ್ಣಕ್ಕಿ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಡಾ. ಸಿದ್ದಾರೆಡ್ಡಿ,ಡಾ. ಮಾನಾಜಿ ಕಲಾಲ, ಡಾ ಗಂಗಪ್ಪ ಗೋಲಬಾಂವಿ,ಡಾ.ಅರುಣ ಕುಲಗೋಡ, ಡಾ.ಶಿವಾನಂದ ಮುಳ್ಳೂರ, ಡಾ. ಆರ್‌.ಆರ್ ಪಾಟೀಲ, ಮಹಾಲಿಂಗ ಹೊಸೂರ, ಕಲ್ಲಪ್ಪ ಚಿಂಚಲಿ ಸೇರಿದಂತೆ ಹಲವರು ಇದ್ದರು. 

 ಕಾರ್ಯಕ್ರಮವನ್ನು ಬಸವರಾಜ ಮೇಟಿ ನಿರೂಪಿಸಿದರು, ಲಕ್ಷ್ಮಣ ಕಿಶೋರ ಸ್ವಾಗತಿಸಿದರು. ಷಣ್ಮುಖ ಕದ್ದಿಮನಿ ವಂದಿಸಿದರು.ಇಂದಿನ ಜಾನಪದ ವೈಭವ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ವಿವಿದ ಕಲಾ ತಂಡಗಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಪ್ರತಿ ತಂಡಗಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.