ಜಿಲ್ಲಾ ಆಸ್ಪತ್ರೆಯಲ್ಲಿ ಹೋಮಿಯೋಪಥಿಗೂ ಭಾರಿ ಬೇಡಿಕೆ
ಬಾಗಲಕೋಟೆ: ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸಾವಿರಾರು ರೋಗಿಗಳಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೋಮಯೋಪಥಿ ಔಷಧಿಗೂ ಸಹ ಭಾರಿ ಬೇಡಿಕೆ ಇದೆ.
ಸಾರ್ವಜನಿಕರಲ್ಲಿ ಹೋಮಿಯೋಪಥಿ ಬಗ್ಗೆ ಹೆಚ್ಚಿನ ಅರಿವು ಇಲ್ಲವಾದರೂ ದಿನಂಪ್ರತಿ ಕನಿಷ್ಠ 20 ರಿಂದ 30 ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲಾ ಆಸ್ಪತ್ರೆಯ ಹೋಮಿಯೋಪಥಿ ವಿಭಾಗಕ್ಕೆ ಭೇಟಿ ನೀಡಿ ಔಷಧಿ ಪಡೆಯುತ್ತಿದ್ದಾರೆ. ಥೈರಾಯಿಡ್, ಲಿವರ್, ಕೂದಲು ಉದುರುವಿಕೆ, ಬಿಳಿಸೆರಗು, ಮುಟ್ಟು ದೋಷ, ಅಲಜರ್ಿ, ಸೈನೆಟಿಸ್, ಆಸಿಡಿಟಿ, ಮೈಗ್ರೇನ್, ಕೀಲು ನೋವು ಸಮಸ್ಯೆಗಳನ್ನು ಹೊತ್ತ ರೋಗಿಗಳಿಗೆ ಹೋಮಿಯೋಪಥಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಡಾ.ಕವಿತಾ ಅಮಾಸಿ.
ಕೆಲ ತಾಯಂದಿರಿಗೂ ತಮ್ಮ ಮಕ್ಕಳಿಗೆ ಕೇವಲ ಹೋಮಿಯೋಪಥಿ ಔಷಧಿಯನ್ನೇ ನೀಡುತ್ತಾರೆ. ಹಲವಾರು ಹೆಣ್ಣುಮಕ್ಕಳಿಗೆ ಬಿಳಿಸೆರಗು ಮುಟ್ಟುದೋಷ ಸಮಸ್ಯೆಗಳನ್ನು ಎಲುವು ಕಳು ನೋವುಗಳಿಂದ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ರಸಾಯನಿಕ ಸಸ್ಯ ಹಾಗೂ ಪ್ರಾಣಿ ಮೂಲಕ ಔಷಧಿಯಾಗಿರುವ ಹೋಮಿಯೋಪಥಿಗೆ ಇತ್ತೀಚೆಗೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ತಿಂಗಳಿಗೆ 500-600 ರೋಗಿಗಳು ತಮ್ಮಿಂದ ಔಷಧೋಪಚಾರ ಪಡೆಯುತ್ತಾರೆನ್ನುತ್ತಾರೆ ಡಾ.ಕವಿತಾ.
ಹೋಮಿಯೋಪಥಿಯಿಂದ ಯಾವುದೇ ರೀತಿಯ ದುಷ್ಪರಿಣಾಮವಿರುವದಿಲ್ಲ. ಇಲ್ಲಿ ನಂಬಿಕೆಯೇ ಮುಖ್ಯವಾಗಿದ್ದು, ಪ್ರತಿ ವೈದ್ಯರು ತಮ್ಮದೇ ಆದ ಅನುಭವದ ಮೇಲೆ ಔಷಧಿಯ ಬಗ್ಗೆ ಹಾಗೂ ಪ್ರಮಾಣ ನಿರ್ಧರಿಸಿ ಉಚಪರಿಸುತ್ತಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 