ಗೃಹ ಸಚಿವ ಅಮಿತ್ ಶಾ ಗೆ ಲೋಕಸಭೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮೂಲಕ ಭರ್ಜರಿ ಸ್ವಾಗತ
ನವದೆಹಲಿ, ಆಗಸ್ಟ್ 6 ಲೋಕಸಭೆಯಲ್ಲಿ ಮಂಗಳವಾರ ಆರಂಭದಿಂದಲೇ ಬಿಜೆಪಿ ಸದಸ್ಯರು ಹಾಗೂ ಕೇಂದ್ರ ಸಚಿವರಲ್ಲಿ ಸಂಭ್ರಮ, ಉತ್ಸಾಹ ಮನೆ ಮಾಡಿರುವುದು ಕಂಡುಬಂತು.. ಜಮ್ಮು - ಕಾಶ್ಮೀರ ಕುರಿತಂತೆ ಸರ್ಕಾರದ ಬಹುನೀರಿಕ್ಷಿತ ಶಾಸನಬದ್ಧ ನಿರ್ಣಯ ಹಾಗೂ ವಿದೇಯಕಗಳನ್ನು ಅನುಮೋದಿಸಲು ಅವರು ಸಿದ್ದವಾಗಿ ಬಂದಂತೆ ಕಂಡು ಬಂತು.
ಜಮ್ಮು ಕಾಶ್ಮೀರ ಪುನರ್ ವಿಂಗಡನೆ ವಿಧೇಯಕ, ಸಂವಿಧಾನ ಕಲಂ 370 ಕುರಿತ ಶಾಸನ ಬದ್ದ ನಿರ್ಣಯ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ವಿಧೇಯಕಗಳಿಗೆ ಸೋಮವಾರ ರಾಜ್ಯಸಭೆ ಅಂಗೀಕಾರ ನೀಡಿತ್ತು
ಲೋಕಸಭೆಯನ್ನು ಗೃಹಸಚಿವ ಅಮಿತ್ ಶಾ ಪ್ರವೇಶಿಸುತ್ತಿದ್ದಂತೆಯೇ ಆಡಳಿತಾರೂಡ ಬಿಜಿಪಿ ಸದಸ್ಯರು ಜೈ ಶ್ರೀ ರಾಂ ಎಂದು ಘೋಷಣೆ ಕೂಗುವ ಮೂಲಕ ಮೇಜು ಕುಟ್ಟಿ ಸ್ವಾಗತಿಸಿದರು
ಲೋಕಸಭೆ ಇಂದು ಬೆಳಗ್ಗೆ ಸಮಾವೇಶಗೊಳ್ಳುವ ಐದು ನಿಮಿಷಗಳ ಮುಂಚೆಯೇ ಗೃಹ ಸಚಿವ ಅಮಿತ್ ಶಾ, ಸದನಕ್ಕೆ ಆಗಮಿಸಿದರು ಹಲವು ಬಿಜೆಪಿ ಸದಸ್ಯರು, ಕೇಂದ್ರ ಸಚಿವರು ಸಹ ಕಲಾಪ ಆರಂಭಕ್ಕೆ ಮುನ್ನವೇ ಸದನ ಪ್ರವೇಶಿಸಿದ್ದರು.
ಅಮಿತ್ ಶಾ ಅವರ ಇಬ್ಬರ ಸಹಾಯಕ ರಾಜ್ಯ ಸಚಿವರಾದ ಜಿ. ಕಿಶನ್ ರೆಡ್ಡಿ ಹಾಗೂ ನಿತ್ಯಾನಂದ್ ರಾಯ್ ಸದನಕ್ಕೆ ಮೊದಲು ಬಂದವರಲ್ಲಿ ಸೇರಿದ್ದರು
ಒಂದು ಹಂತದಲ್ಲಿ ಕೇಂದ್ರ ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರೊಂದಿಗೆ ದೊಡ್ಡ ಧ್ವನಿಯಲ್ಲಿ ಮಾತುಕತೆ ನಡೆಸುತ್ತಿದ್ದು ಕಂಡು ಬಂತು. ಇಬ್ಬರೂ ನಾಯಕರು ಲೋಕಸಭೆಯ ಇಂದಿನ ಕಲಾಪಕ್ಕೆ ಸೂಕ್ತ ಸಿದ್ಧತೆಮಾಢಿಕೊಳ್ಳುವಂತೆ ಖುಷಿಯಿಂದ ಹೇಳುತ್ತಿರುವುದು ಕೇಳಿ ಬಂತು.
ಲೋಕಸಭೆಯ ಉಪನಾಯಕರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಸದಸ್ಯರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ ಸಹ ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 