ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಹಿಂದು ಮುಸ್ಲಿಮರು

Hindus and Muslims celebrated Bakrid festival with enthusiasm

ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಹಿಂದು ಮುಸ್ಲಿಮರು         

ಸಿರುಗುಪ್ಪ 08: ಈದ್ ಉಲ್ ಆಜ್ಹಾ ಬಕ್ರೀದ್ ಹಬ್ಬ ಸಡಗರ ಸಂಭ್ರಮದಿಂದ ಈದ್ಗಾ ಮೈದಾನದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಪರಸ್ಪರ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್ ವಿನಿಮಯ ಹಸ್ತ ಲಾಗಿಸಿ ಸಂತೋಷದಿಂದ ಅಪ್ಪಿಕೊಂಡು ಈದ್ ಮುಬಾರಕ್ ಶುಭ ಹಾರೈಸಿದರು ಈದ್ಗಾ ಮತ್ತು ಖಬರಸ್ಥಾನ್ ಕಮಿಟಿಯ ಮಾಜಿ ಅಧ್ಯಕ್ಷರಾದ ಹಂಡಿ ಹಾಶಿಮ್ ಚಿಟಿಕಿ ಎಸ್‌. ಮೊಹಮ್ಮದ್ ಹುಸೇನ್ ಸಾಬ್ ಸಮಾಜ ಸುಧಾರಕ ಅಲ್ಹಾಜ್ ಅಬ್ದುಲ್ ನಬಿ ನಗರ ಸಭೆ ಅಧ್ಯಕ್ಷರ ಪತಿ ಬಿ.ವೆಂಕಟೇಶ್ ಕಾಂಗ್ರೆಸ್ ಮುಖಂಡರಾದ ಗೊರವರ ಶ್ರೀನಿವಾಸ್, ಮೋದಿನ್, ಹೋಟೆಲ್ ಹಾಜಿ ಗಫೂರ್ ಸಾಬ್, ಖಾಜಿ ಸೈಯದ್ ಜೀಲಾನ್ ಪಾಷಾ ಖಾದ್ರಿ, ಖತೀಬ್ ಅಬುಲ್ ಹಸನ್, ಖತೀಬ್ ಜಹೀರುದ್ದೀನ್ ಬಾಬು, ಹಾಜಿ ಹಂಡಿ ಹುಸೇನ್ ಬಾಷಾ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎನ್‌.ನಜೀರ್ ಅಹ್ಮದ್, ಮೊಹಮ್ಮದ್ ಶಫಿ, ಡಬಲ್ ಬಾಂಡ್ ಹಾಜಿ ಟಿ. ಜಿ. ಅಬ್ದುಲ್ ಗನಿ, ಬಿ.ಅಫ್ಜಲ್ ಹುಸೇನ್, ಎಲ್ಲಾ ಮೊಹಲ್ಲಾ ಗಳ ಮುಖ್ಯಸ್ಥರ ಸಮ್ಮುಖದಲ್ಲಿ ಶಾಸಕರಿಗೆ ಗೌರವಿಸಿ ಸನ್ಮಾನಿಸಿ ಮನವಿ ಪತ್ರ ಈದ್ಗಾ ಮತ್ತು ಖಬರಸ್ಥಾನ್ ಕುರಿತು ಅನುದಾನ ನೀಡಲು ವಿನಂತಿಸಿದರು ಸನ್ಮಾನ ಸ್ವೀಕರಿಸಿದ ಶಾಸಕ ಬಿ. ಎಂ. ನಾಗರಾಜ ಈಡೇರಿಕೆಗೆ ಭರವಸೆ ನೀಡಿದರು.  

     ಸಿರುಗುಪ್ಪ ತ್ಯಾಗ ಬಲಿದಾನ ಸಮಾನತೆಯ ಸಂದೇಶ ಸಾರುವ ಬಕ್ರೀದ್ -ಖತೀಬ್ ಅಬುಲ್ ಹಸನ್ ಬಿನ್ ಜಾಕೀರ್ ಹುಸೇನ್ಸಿರುಗುಪ್ಪ- ತಾಲೂಕಿನಾದ್ಯಂತ ಬಕ್ರೀದ್ ಹಬ್ಬ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಆಚರಣೆ ಸರ್ವರೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದದಿಂದ ಬಾಳಬೇಕು ಬಡವರ ಹೃದಯ ಗೆದ್ದರೆ ಅಲ್ಲಾಹನ ರಸೂಲರ ಜಗತ್ ಗುರುಗಳ ಗುರು ಹಿರಿಯರ ಅಲ್ಲಾಹ ಸಂತುಷ್ಟನಾಗುತ್ತಾನೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಸಾರಿದ್ದಾರೆ ಹೀಗಾಗಿ ನಾವು ಬಡವರ ಹೃದಯ ಗೆಲ್ಲುವ ಮೂಲಕ ಅಲ್ಲಾಹನ ಪ್ರೀತಿ ಅನುಗ್ರಹಕ್ಕೆ ಪಾತ್ರರಾಗಬೇಕು ನಮ್ಮ ಜೀವನ ಧ್ಯೇಯ ವಾಗಿಸಿಕೊಳ್ಳಬೇಕು ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತವಾಗಿದೆ ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನ ಈ ಹಬ್ಬ ಸಾರುತ್ತದೆ ಅಲ್ಲಾಹನ ಆದೇಶ ಬಂದಾಗ ತಮ್ಮ ಜೀವಕ್ಕಿಂತ ಅಮೂಲ್ಯವಾದ ಪ್ರವಾದಿ ಇಸ್ಮಾಯಿಲ್ ತಮ್ಮ ಪ್ರೀತಿಯ ಮಗುವನ್ನು ತ್ಯಾಗ ಮಾಡಲು ಅವರು ಹಿಂದೇಟು ಹಾಕಲಿಲ್ಲ ಎಂದು ಖತೀಬ್ ಅಬುಲ್ ಹಸನ್ ಬಿನ್ ಜಾಕಿರ್ ಹುಸೇನ್ ಅವರು ಈದುಲ್ ಆಜ್ಹಾ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು ಮತ್ತು ದುಆ ಆಶೀರ್ವಚನ ನೀಡಿದರು ಎಲ್ಲರೂ ಸುವ್ಯವಸ್ಥೆ ಕಾಪಾಡಿಕೊಂಡು ಶಾಂತಿ ಮತ್ತು ಸೌಹಾರ್ದತೆಯಿಂದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಸೌಹಾರ್ದತೆಗೆ ಧಕ್ಕೆ ಯಾಗದಂತೆ ಮಾರ್ಗಗಳ ಕುರಿತು ಮಾಹಿತಿ ನೀಡಿದರು.  

       ಸಿರುಗುಪ್ಪ ನಗರದ ಈದ್ಗಾ ಮೈದಾನದಲ್ಲಿ ಎರಡು ರಕಾತ್ ನಮಾಜ್ ವಾಜಿಬ್ ವಿಶೇಷ ಸಾಮೂಹಿಕವಾಗಿ ಖತೀಬ್ ಇಮಾಮ್ ಖಲಂದರ್ ಸಾಹೇಬ್ ಅವರು ನಿರ್ವಹಿಸಿ ದುಆ ಯಾಚನೆಯಲ್ಲಿ ಅಲ್ಲಾಹನ ರಸೂಲರ ಆದರ್ಶ ಗುಣ ಸಿದ್ದಾಂತ ತತ್ವ ಮಹತ್ವದ ಸನ್ಮಾರ್ಗದ ಅಂಶವನ್ನು ಮನವರಿಕೆ ಮಾಡಿಕೊಡುವ ಶಾಂತಿ ಸಂದೇಶ ನೀಡಿದರು ಮತ್ತು ಜಗತ್ತಿನಲ್ಲಿರುವ ನಮ್ಮೆಲ್ಲರಿಗೂ ಸುಖ ಸಂತೋಷ ಸಮೃದ್ಧಿ ನೀಡಲಿ ಎಂದು ಕೋರಿದರುಕರ್ನಾಟಕ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಈದ್ಗಾ ಮೈದಾನಕ್ಕೆ ತೆರಳಿ ಪರಸ್ಪರ ವಿನಿಮಯದೊಂದಿಗೆ ಈದ್ ಮುಬಾರಕ್ ಸಡಗರ ಸಂಭ್ರಮ ಹಬ್ಬದ ಶುಭಾಶಯಗಳು ಕೋರಿದರು ಈದ್ಗಾ ಮತ್ತು ಖಬರಸ್ಥಾನ್ ಕಮಿಟಿಯ ಮಾಜಿ ಅಧ್ಯಕ್ಷ ಹಂಡಿ ಹಾಶಿಮ್ ಅವರು ಕಮಿಟಿಯ ಪರವಾಗಿ ಈದ್ಗಾ ಕಾಂಪೌಂಡ್ ನೂತನ ಈದ್ಗಾ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಸರ್ಕಾರದ ಅನುದಾನ ಅಥವಾ ಶಾಸಕರ ಅನುದಾನದಲ್ಲಿ ಕೊಡಬೇಕು ಎಂದು ಮನವಿ ಮಾಡಿದರು. 

       ಶಾಸಕ ಬಿ ಎಂ ನಾಗರಾಜ ಅವರು ಗೌರವ ಸನ್ಮಾನ ಸ್ವೀಕರಿಸಿ ಹಬ್ಬದ ಶುಭಾಶಯಗಳನ್ನು ನೀಡುವ ಮೂಲಕ ಹೊಸ ಈದ್ಗಾ ನಿರ್ಮಾಣಕ್ಕೆ ಅನುದಾನ ನೀಡಲು ಭರವಸೆ ಕೊಟ್ಟರು ಮತ್ತು ಸಿರುಗುಪ್ಪ ನಗರದಲ್ಲಿ ಒಂದು ಸುಸಜ್ಜಿತ ಮುಸ್ಲಿಂ ಶಾದಿ ಮಹಲ್ ನಿರ್ಮಾಣ ಮಾಡುವುದಾಗಿ ತಮ್ಮ ಆಶಯವಾಗಿದೆ ಎಂದರುಕಮಿಟಿಯ ನೂತನ ಸದಸ್ಯರಾದ ಚಿಟಿಕಿ ಎಸ್‌. ಮೊಹಮ್ಮದ್ ಹುಸೇನ್ ಬಾಷಾ ಎಲ್ಲಾ ಸದಸ್ಯರು ಖತೀಬ್ ಜಹೀರುದ್ದೀನ್ ಬಾಬು, ಹಾಜಿ ಹಂಡಿ ಹುಸೇನ್ ಬಾಷಾ, ಖಾಜಿ ಸೈಯದ್ ಜೀಲಾನ್ ಪಾಷಾ ಖಾದ್ರಿ, ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಹಂಡಿ ಹುಸೇನ್ ಸಾಬ್, ಹಾಜಿ ಚೌದ್ರಿ ಖಾಜಾ ಸಾಬ್, ಹಾಜಿ ಹೋಟೆಲ್ ಗಪೂರ್ ಸಾಬ್, ಡಬಲ್ ಬಾಂಡ್ ಹಾಜಿ ಟಿ.ಜಿ. ಅಬ್ದುಲ್ ಗನಿ ನಿಜಾಮಿ, ಸೌದಾಗರ್ ಹಾಜಿ ಇಲಿಯಾಸ್, ಹಾಜಿ ಬಳ್ಳಾರಿ ಶೇಕ್ ವಲಿ ಸಾಬ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎನ್‌.ನಜೀರ್ ಅಹ್ಮದ್, ಕಾಂಗ್ರೆಸ್ ಮುಖಂಡ ರಾದ ಬಿ.ವೆಂಕಟೇಶ್, ಗೊರವರ ಶ್ರೀನಿವಾಸ್, ಮೋದಿನ್, ಟಿ. ನಜೀರ್, ನಗರಸಭೆ ಸದಸ್ಯ ಮೀರ್ ಹುಸೇನ್, ಉಡೆಗೋಳು ಖಾಜಾ ಸಾಬ್, ಎಲ್ಲಾ ಮಸೀದಿಗಳ ಇಮಾಮು ಖತೀಬ್ ಹಾಫೀಜರು ಮೌಲಾನರು ಎಲ್ಲಾ ಮುಖ್ಯಸ್ಥರು ಮುಖ್ಯ ರಸ್ತೆಗಳಿಂದ ಅಲ್ಲಾಹನ ನಾಮ ಸ್ಮರಿಸುತ್ತಾ ಗುಣ ನುಡಿಮುತ್ತುಗಳ ದೊಂದಿಗೆ ಈದ್ಗಾ ಮೈದಾನಕ್ಕೆ ಹಿರಿಯರು ಕಿರಿಯರು ಎನ್ನದೆ ಪಾಲ್ಗೊಂಡು ಸಂಭ್ರಮದಿಂದ ಬಕ್ರೀದ್ ಹಬ್ಬದಲ್ಲಿ ಪರಸ್ಪರ ಈದ್ ಮುಬಾರಕ್ ಶುಭ ಕೋರಿ ಖಬರ್ ಸ್ಥಾನ್ ಗೆ ತೆರಳಿ ಖುರಾನ್ ಫಾತೆಹ ಓದಿಕೆ ಜಿಯಾರತ್ ದರ್ಶನ ನಂತರ ಖುರ್ಬಾನಿದಲ್ಲಿ ನಿರತರಾದರು ಡಿವೈಎಸ್ಪಿ ಅವರು ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಿದರು ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು