ವಾಟರ್ ರೂಲಿಂಗ್ ಬೋಟ್ ಉದ್ಘಾಟಿಸಿದ ಎಚ್‌ಕೆಪಿ

ವಾಟರ್ ರೂಲಿಂಗ್ ಬೋಟ್ ಉದ್ಘಾಟಿಸಿದ ಎಚ್‌ಕೆಪಿ  HKP inaugurates water ruling boat


ಗದಗ  4:  ಭೀಷ್ಮ ಕೆರೆಯು ನಗರದ ಸೌಂದರ್ಯ ಹೆಚ್ಚಿಸಿದೆ. ಇಲ್ಲಿಗೆ ಬರುವ ಜನರು ಇನ್ನು ಮುಂದೆ ಬೋಟಿಂಗ್ ಜತೆಗೆ ವಾಟರ್ ರೂಲಿಂಗ್ ಬೋಟ್ ಅನುಭವ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ  ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು. ಸೋಮವಾರದಂದು ನಗರದ ಬೀಷ್ಮ ಕೆರೆಯಲ್ಲಿ ನೂತನ ವಾಟರ್ ರೂಲಿಂಗ್ ಬೋಟ್ ಉದ್ಘಾಟಿಸಿ ಮಾತನಾಡಿದರು   ಈ ಸಂದರ್ಭದಲ್ಲಿ  ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್  ಹಾಜರಿದ್ದರು.