ರಾಜಮಟ್ಟದ ‘ಕೃತಕ ಬುದ್ಧಿಮತ್ತೆ’ ವಿಚಾರ ಸಂಕೀರಣದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಸಂಶೋಧನಾ ಮಂಡನೆ...

ರಾಜಮಟ್ಟದ ‘ಕೃತಕ ಬುದ್ಧಿಮತ್ತೆ’ ವಿಚಾರ ಸಂಕೀರಣದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಸಂಶೋಧನಾ ಮಂಡನೆ... Government college students present research at royal level symposium on 'Artificial Intelligence'..

ವಿಜಯಪುರ 16 :  ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್‌್ರ ವಿಭಾಗದ ಬಿ.ಕಾಂ 6 ನೇಯ ಸೆಮೆಸ್ಟರ್‌ನ ದೀಪ್ತಿ ವಿಶ್ವಕರ್ಮ ಹಾಗೂ ಗೀತಾ ಮಿಸ್ಕಿನ ಇವರು ಇತ್ತೀಚೆಗೆ ತೆಲಸಂಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಕೃತಕ ಬುದ್ಧಿಮತ್ತೆ ಮತ್ತು ಮಾನವೀಯ ವಿಷಯಗಳ ಭವಿಷ್ಯ” ವಿಷಯ ಕುರಿತಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕೀರಣದಲ್ಲಿ “ದಿ ಎ.ಐ. ರೆಶ್ಯೂಲ್ಯೂಷನ್ ಇನ್ ಬ್ಯಾಂಕಿಂಗ್‌-ಹೌವ್ ಅಟೋಮೇಷನ್ ಇಸ್ ರೀಶೇಪಿಂಗ್ ಫೈನಾನ್ಸ್‌” ವಿಷಯ ಕುರಿತು ಸಂಶೋಧನಾ ಲೇಖನ ಮಂಡಿಸಿ ಉತ್ತಮ ಸಾಧನೆ ತೋರಿದ್ದಾರೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ. ಎ.ಐ.ಹಂಜಗಿ, ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್‌.ಎಸ್‌.ಕುರಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್‌.ಖೊದ್ನಾಪೂರ, ಪ್ರಾಧ್ಯಾಪಕರಾದ ಡಾ. ಐ.ಎಸ್‌.ಶಿವಶರಣರ, ಪ್ರೊ. ಆರ್‌.ಐ.ಜೋಗೂರ, ಪ್ರೊ. ವಲ್ಲಭ ಕಬಾಡೆ ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.