ಗೂಡ್ಸ ವಾಹನ ಪಲ್ಟಿ: 33 ನರೇಗಾ ಕಾರ್ಮಿಕರಿಗೆ ಗಾಯ: ಬೈಕ್ ಸವಾರ ಸಾವು
Goods vehicle overturns: 33 Narega workers injured
ಯಮಕನಮರಡಿ 24: ನರೇಗಾ ಕೋಲಿ ಕಾರ್ಮಿಕರನ್ನು ಕರೆದುಕೊಂಡು ಹೊರಟ್ಟಿದ್ದ ಗೂಡ್ಸವಾಹನ ಸಮೀಪದ ಸಂಗಮ ಸಕ್ಕರೇ ಕಾರ್ಖಾನೆ ಹತ್ತಿರ ಪಲ್ಟಿಯಾಗಿ 33 ಕಾರ್ಮಿಕರು ಗಾಯಗೊಂಡ ಘಟನೆ ವರದಿಯಾಗಿದೆ.
ವಾಹನಕ್ಕೆ ಅಡ್ಡ ಬಂದ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತ ಪಟ್ಟ ಬಗ್ಗೆ ವರದಿಯಾಗಿದೆ. ಗುರುವಾರ ನಡೆದ ಈ ದುರ್ಘಟನೆಯಲ್ಲಿ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಮಾಜಿ ಯೋಧ ಅಡಿವೆಪ್ಪಾ ಬಸವಣ್ಣಿ ಅಂಕಲಿ 42 ಮೃತಪಟ್ಟ ವ್ಯಕ್ತಿ. ಯಮಕನಮರಡಿ ಗ್ರಾಮ ಪಂಚಾಯತಿಯ ನರೇಗಾ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಗೂಡ್ಸ ವಾಹನದಲ್ಲಿ ತೆರಳುತ್ತಿದ್ದಾಗ ಹಿಡಕಲ್ ಡ್ಯಾಂ ಸಮೀಪದ ಸಂಗಮ ಸಕ್ಕರೇ ಕಾರ್ಖಾನೆ ಹೂಸುರ ಕ್ರಾಸ ಹತ್ತಿರ ಬುಲೆಟ್ ವಾಹನ ಅಡ್ಡ ಬಂದದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಾರ್ಮಿಕರಿದ್ದ ವಾಹನ ಉರುಳಿ ಬಿದ್ದು ಮಾತ್ರವಲ್ಲ ಬುಲೆಟ್ ವಾಹನಕ್ಕೂ ಡಿಕ್ಕಿ ಹೊಡೆದು, ಗೂಡ್ಸ ವಾಹನದಲ್ಲಿ ಸುಮಾರು 33 ಜನ ಕಾರ್ಮಿಕರು ಗಾಯಗೊಂಡಿದ್ದು ಜೊತೆಗೆ ಬೈಕ ಸವಾರನು ಕೂಡ ತೀವ್ರವಾಗಿ ಗಾಯಗೊಂಡಿರುವುದರಿಂದ ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಅದರಲ್ಲಿ ಐದು ಜನ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬುಲೆಟ್ ಸವಾರನನ್ನು ಸಮೀಪದ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಆತನಿಗೆ ಚಿಕಿತ್ಸೆ ಫಲಿಸದೆ ಸವಾರ ಅಡಿವೆಪ್ಪ ಮೃತಪಟ್ಟಿದ್ದು ಇರುತ್ತದೆ. ಸ್ಥಳಕ್ಕೆ ಯಮಕನಮರಡಿ ಪಿ ಎಸ್ ಐ ಮಣ್ಣಿಕೇರಿ ಬೆಟ್ಟಿ ನೀಡಿ ಪರೀಶೀಲಿಸಿ ಸದರಿ ಪ್ರಕರಣವನ್ನು ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 