ಪೊಲೀಸ್ ಇಲಾಖೆಯ ಹಳೇ ಸಂಪ್ರದಾಯಕ್ಕೆ ಪ್ರವೀಣ್ ಸೂದ್ ಗುಡ್ ಬೈ; ಸರಳತೆ ಮೊರೆ ಹೋದ ಡಿಜಿ
ಬೆಂಗಳೂರು, ಜೂ.5, ಪೊಲೀಸ್ ಇಲಾಖೆಯ ಹಳೆಯ ಸಂಪ್ರದಾಯವೊಂದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶ ಪ್ರವೀಣ್ ಸೂದ್ ಅವರು ತೀಲಾಂಜಲಿ ಹಾಡಿದ್ದಾರೆ.ಇನ್ನು, ಮುಂದಿನ ದಿನಗಳಲ್ಲಿ ಐಜಿಪಿ ಅವರು ತಮ್ಮ ಕಚೇರಿಯಿಂದ ಹೊರಗಡೆ ಬಂದಾಗ ಹಾಗೂ ರಾಜ್ಯ ಪ್ರವಾಸ ಕೈಗೊಂಡಾಗ ಸ್ಥಳೀಯ ಪೊಲೀಸರು ರಸ್ತೆ ಬದಿ ಅಲ್ಲಲ್ಲಿ ಶಿಸ್ತಾಗಿ ನಿಂತು ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು. ಆದರೀಗ ಈ ಪದ್ದತಿಗೆ ಗುಡ್ ಬೈ ಹೇಳಲಾಗಿದೆ.ಡಿಜಿ ಮತ್ತು ಐಜಿಪಿ ಯಾವುದೇ ವೇಳೆ ರಾಜ್ಯ ಪ್ರವಾಸ ಕೈಗೊಂಡಾಗ ಜಿಲ್ಲಾ ಸರಹದ್ದು ದಾಟುವವರೆಗೂ ಪೊಲೀಸರನ್ನು ಕಳುಹಿಸಲಾಗುತ್ತಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಡಿಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು ರಸ್ತೆ ಬದಿ ನಿಲ್ಲುತ್ತಿದ್ದರು. ಆದರೀಗ ಯಾವ ಅಧಿಕಾರಿಯೂ ರಸ್ತೆಯಲ್ಲಿ ನಿಂತು ಕಾಯುವ ಅವಶ್ಯಕತೆ ಇಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸಿಬ್ಬಂದಿಗೆ ಸೂಚಿಸಿದ್ದಾರೆ.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 