ಶಂಕರಾನಂದ ಸಂಕದಾಳಗೆ ಚಿನ್ನದ ಪದಕ

ಬೆಳಗಾವಿ 03: ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯ ಸಿವ್ಹಿಲ್ ವಿಭಾಗದ ಎಂ.ಟೆಕ್‌. ವೇಷ್ಟ ವಾಟರ್ ಮ್ಯಾನೇಜಮೆಂಟ್, ಹೆಲ್ಥ ಮತ್ತು ಸೇಫ್ಟಿ ಇಂಜನಿಯರಿಂಗ ವಿಭಾಗದ ವಿದ್ಯಾರ್ಥಿ ಶಂಕರಾನಂದ ಸಂಕದಾಳ 2023-24 ರ ಎಂ.ಟೆಕ್‌. ಪರೀಕ್ಷೆಯಲ್ಲಿ ವ್ಹಿ.ಟಿ.ಯು ಗೆ ಚಿನ್ನದ ಪದಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.  

ಅವರ ಸಾಧನೆಗೆ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಮಾಜಿ ಸಂಸದೆ ಮಂಗಲ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ಭಿ. ದೇಶಪಾಂಡೆ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಸಾಗರ ಬೆಳಗಾಂವಕರ, ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಸ್ನಾತಕೋತ್ತರ ಸಿವ್ಹಿಲ್ ವಿಭಾಗದ ಡಾ. ಬಿ.ಟಿ. ಸುರೇಶ ಬಾಬು ಹಾಗೂ ಪ್ರೊ. ಎಂ.ವ್ಹಿ. ಕಂಠಿ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದ್ದಾರೆ.