ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಗೋಕುಲೋತ್ಸವ, ವೇಷಭೂಷಣ

ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಗೋಕುಲೋತ್ಸವ, ವೇಷಭೂಷಣ  Gokulotsava, costumes by Hindu Seva Pratishthan

ಯಲಬುರ್ಗಾ 17: ಶ್ರಾವಣಮಾಸವು ಧ್ಯಾನ, ಜಪ, ಯೋಗ ಸಾಧನೆಗೆ ಬಹು ಪ್ರಶಸ್ತವಾದ ಮಾಸ ಈ ವೇಳೆ ಆಗಮಿಸುವ ಹಬ್ಬಗಳನ್ನು ಆಚರಿಸುವುದರಿಂದ ಭವಿಷ್ಯದಲ್ಲಿ ಸದ್ಗತಿ ದೊರೆಯುತ್ತದೆ ಎಂದು ಹಿಂದು ಸೇವಾ ಪ್ರತಿಷ್ಠಾನದ ಬಳ್ಳಾರಿ ಕೊಪ್ಪಳ ವಿಭಾಗ ಸಂಚಾಲಕರಾದ ಭೀಮರಾವ್ ದೇಶಪಾಂಡೆ ಹೇಳಿದರು.  

ಪಟ್ಟಣದ ಶ್ರೀಧರ ಮುರಡಿ ಮಠದಲ್ಲಿ ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ  ಶನಿವಾರ ನಡೆದ ಗೋಕುಲೋತ್ಸವ ಕಾರ್ಯಕ್ರಮದ ಪ್ರಯುಕ್ತ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಕೃಷ್ಣನ ಭವ್ಯ ಚರಿತಾಮೃತ ಕುರಿತು ವಿವರಿಸಿದರು. ಶಾಲಾ ಮಕ್ಕಳು ಶ್ರೀಕೃಷ್ಣ, ರುಕ್ಮಿಣಿ, ರಾಧೆಯರ ವೇಷಭೂಷಣ ಧರಿಸಿ ನೋಡುಗರ ಮನಸೆಳೆದರು.  

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮಹಿಳಾ ಮುರ್ಚಾ ಅಧ್ಯಕ್ಷೆ ಸಂತೋಷಿಮಾ ಜೋಶಿ, ಬಸವಲಿಂಗೇಶ್ವರ ಅಕ್ಕನ ಬಳಗ ಅಧ್ಯಕ್ಷರಾದ ಸವಿತಾ ಮುರಡಿಮಠ್, ಬಸವಲಿಂಗೇಶ್ವರ ಶಾಲೆಯ ಮುಖ್ಯಗುರುಗಳು ಸುನೀತಾ ಪತಂಗರಾಯ್, ಧರ್ಮಸ್ಥಳ ಸಂಘದ ಮ್ಯಾನೇಜರ್ ಗೀರೀಶ್ , ಈರನಗೌಡ ಈಳಿಗೇರ್ ಸೇರಿ ಮಕ್ಕಳ ಪಾಲಕರು, ಪೋಷಕರು ಹಾಜರಿದ್ದರು.