ಅಪಾರ ಭಕ್ತರ ಆರಾಧ್ಯ ದೇವಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ
Goddess Danamma Devi Fair
ಮಹಾಲಿಂಗಪುರ ದಾನಮ್ಮ ದೇವಿ ಜಾತ್ರೆ
ಮಹಾಲಿಂಗಪುರ 06: ಗುಡ್ಡಾಪುರದ ಒಡತಿ ಮಹಿಳೆಯರ ಪಾಲಿನ ಮಹಾದೈವ ಶ್ರೀ ದಾನಮ್ಮ ದೇವಿ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದು ಹನ್ನೆರಡನೆಯ ಶತಮಾನದ ಮಹಾ ಶರಣಿ ತಾಯಿ ದಾನಮ್ಮ ನಿರ್ಮಲ ಭಕ್ತಿಯಿಂದ ಬೇಡಿ ಬರುವ ಭಕ್ತರಿಗೆ ಸಕಲ ಸೌಭಾಗ್ಯ ಕರುಣಿಸುವ ತಾಯಿ ದಾನಮ್ಮ.
ಸ್ಥಳೀಯ ಬಸ್ ನಿಲ್ದಾಣದ ಹತ್ತಿರವಿರುವ ಮರೆಗುದ್ದಿ ಪ್ಲಾಟಿನಲ್ಲಿರುವ ಶ್ರೀ ದಾನಮ್ಮದೇವಿ ಜಾತ್ರೆ ಅತೀ ವಿಜೃಂಭಣೆಯಿಂದ ಜರುಗಿತು.
ಉಡಿ ತುಂಬುವ ಕಾರ್ಯ : ದೇವಿ ಜಾತ್ರೆ ನಿಮಿತ್ಯ ಸಾವಿರಾರು ಮುತೈದೆಯರಿಗೆ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾದರು.
ಮಹಾಲಿಂಗಪುರಕ್ಕೆ ಬಂದ ದಾನಮ್ಮ : ನಗರದ ಮರೆಗುದ್ದಿಯವರ ತೋಟದಲ್ಲಿರುವ ಬಾಂವಿಯ ಮಾಡಿನಲ್ಲಿ ಒಂದು ದಾನಮ್ಮ ದೇವಿ ಫೋಟೋ ಇಟ್ಟು ಪೂಜಿಸಲಾಗುತಿತ್ತು. ಒಂದು ದಿನ ಯಾರೋ ಅದನ್ನು ಭಾಂವಿಗೆ ಎಸೆದು ಬಿಟ್ಟರು ನಂತರ ನಡೆದಿದ್ದೆ ಪವಾಡ ದೇವಿ ದಿನ ನಿತ್ಯವೂ ಮರೆಗುದ್ದಿಯವರ ಹೆಣ್ಣು ಮಗಳ ಕನಸ್ಸಿನಲ್ಲಿ ಬಂದು ನನ್ನನ್ನು ಏಕೆ ಬಾಂವಿಗೆ ಎಸೆದಿರಿ ಎಂದು ಕೆಳ ತೊಡಗಿದಳು. ನಾನು ಇಲ್ಲೇ ನೆಲೆಸುತ್ತೇನೆ ನನ್ನನ್ನು ಪುನ್ಹ ತಂದು ಪ್ರತಿಷ್ಠಾಪನೆ ಮಾಡು ಎಂದು ನಿತ್ಯವು ಭೇಡ ತೊಡಗಿದಾಗ ಮರೆಗುದ್ದಿಯರು ಮತ್ತೆ ಒಂದು ದಾನಮ್ಮ ದೇವಿ ಫೋಟೋ ತಂದು ಬಾಂವಿಯ ಮಾಡಿನಲ್ಲಿಟ್ಟು ಪೂಜಿಸ ತೊಡಗಿದಾಗ ಕನಸ್ಸಿನಲ್ಲಿ ಬರುವುದು ನಿಲ್ಲಿಸುತ್ತಾಳೆ ತಾಯಿ ದಾನಮ್ಮ ಭಕ್ತರಿಗೆ ಮತ್ತೆ ದರ್ಶನ ಕೊಡತೊಡಗಿದಳು.
ಇದು ಬೃಹತ ಪ್ರಮಾಣದಲ್ಲಿ ನಡೆಯುವ ಜಾತ್ರೆ ದಾನಮ್ಮನ ಇರುವಿಕೆಗೆ ಸಾಕ್ಷಿಯಾಗಿದೆ ಅಪಾರ ಭಕ್ತರು ದೇವಿಯನ್ನು ಆರಾಧಿಸುತ್ತಾರೆ.
ಈ ಸಂಧರ್ಭದಲ್ಲಿ ಊರಿನ ಎಲ್ಲ ವರ್ಗದ ಜನರು ಭಕ್ತಿಯಿಂದ ಸೇರಿ ದೇವಿ ಜಾತ್ರೆ ಯಶಸ್ಸುಗೊಳಿಸಿದರು. ಇದೇ ಸಂಧರ್ಭದಲ್ಲಿ ಶೇಖರ ಅಂಗಡಿ, ಸಿದ್ದು ಶಿರೋಳ, ಅಶೋಕ ದಿನ್ನಿಮನಿ, ಚಿದಾನಂದ ಚಿಂದಿ, ದುಂಡಪ್ಪ ಬಂಡಿ, ವಿರೂಪಾಕ್ಷಯ್ಯಾ ಪಂಚಕಟ್ಟಿಮಠ, ಮಹೇಶ ಸವದಿ, ಪ್ರಭು ಕುಳ್ಳೊಳ್ಳಿ,ಎಸ್ ಬಿ ಮಠಗಾರ,ಜಿ ಎ ಮಠಪತಿ,ಚೇತನ ಸುಣದೊಳಿ, ಪ್ರಶಾಂತ ಅಂಗಡಿ, ಬಸು ಪರಿಟ್, ದಯಾನಂದ ಕಲ್ಲೇದ, ಅರ್ಜುನ ಪವಾರ, ಬಸು ಹೊಳ, ಸೇರಿದಂತೆ ಹಲವರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 