ದೂಧಗಂಗಾ ನದಿಗೆ ಗಂಗಾ ಪೂಜೆ
ಯಕ್ಸಂಬಾ ಪಟ್ಟಣದ ರೈತರು ದೂಧಗಂಗಾ ನದಿಗೆ ಗಂಗಾ ಪೂಜೆ ಸಲ್ಲಿಸಿದರು
ಮಾಂಜರಿ 21: ಯಕ್ಸಂಬಾ ಪಟ್ಟಣದ ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ವತಿಯಿಂದ ರೈತರು ಮತ್ತು ಸದಸ್ಯರು ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಮರ್ಪಕ ಮಳೆ ಸುರಿದು ದೂಧಗಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ದೂಧಗಂಗಾ ನದಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅಪರ್ಿಸಿದರು.
ಪ್ರಾರಂಭದಲ್ಲಿ 5 ಜನ ಸುಮಂಗಲೆಯರಿಂದ ನದಿಯ ಪೂಜೆ ನೆರವೇರಿತು. ಕಳೆದ 2-3 ವರ್ಷಗಳಿಂದ ಮಳೆಗಾಲದಲ್ಲಿ ಮಳೆಯು ಸಂಪೂರ್ಣವಾಗಿ ಕೈಕೊಟ್ಟಿತ್ತು. ಆದರೆ ಈ ವರ್ಷ ಮಳೆಯ ಪ್ರಮಾಣ ಹೆಚ್ಚಿಗೆ ಆಗಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ರೈತರಿಗೆ ಅನೂಕೂಲವಾಗಿದೆ. ಪಟ್ಟಣದ ದೂದಗಂಗಾ ನದಿಯ ಪಾತ್ರ ತುಂಬಿ ಹರಿಯುತ್ತಿದ್ದು, ಮಳೆ ಹೆಚ್ಚಿಗೆ ಆಗಿದ್ದರಿಂದ ಪಟ್ಟಣದ ರೈತರು ಮತ್ತು ಸಾರ್ವಜನಿಕರು ದೂಧಗಂಗಾ ನದಿಗೆ ಬಾಗಿನ ಅಪರ್ಿಸಿ ಪೂಜೆ ಸಲ್ಲಿಸಿದರು.
ಕರ್ಲಹೊಂಡಲಿಂಗೇಶ್ವರ ಅನ್ನದಾನ ಸಮಿತಿ ಅಧ್ಯಕ್ಷ ಮಹೇಶ ಬಾಕಳೆ, ಸುರೇಶ ಹಿರೇಮಠ, ದರೆಪ್ಪಾ ಖೋತ, ಪುಂಡಲೀಕ ಹಿಟಣೆ, ಬಾಬು ಬಾಕಳೆ, ನಿಂಗಪ್ಪಾ ದವಣೆ, ಸುರೇಶ ಕಬಾಡೆ, ಪುಂಡಲೀಕ ಸಾತ್ವರ, ಪಂಡಿತ ಜಾಧವ, ಶ್ರಾವಣ ರಾಯಮಾನೆ, ಅಣ್ಣಪ್ಪಾ ಖೋತ, ಮಾರುತಿ ಮಜಗೆ, ರಾಹುಲ್ ನಾಯಿಕ್, ವಿಠ್ಠಲ ನಾಯಿಕ್ ಸೇರಿದಂತೆ ರೈತರು, ಮಹಿಳೆಯರು ಉಪಸ್ಥಿತರಿದ್ದರು,
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 