ಮೊಬೈಲ್ ವಿಚಾರಕ್ಕೆ ದೇವಸ್ಥಾನದಲ್ಲೇ ಸ್ನೇಹಿತನ ಕೊಲೆ

ಮೊಬೈಲ್ ವಿಚಾರಕ್ಕೆ ದೇವಸ್ಥಾನದಲ್ಲೇ ಸ್ನೇಹಿತನ ಕೊಲೆ Friend murdered inside temple over a mobile phone issue

ಲೋಕದರ್ಶನ ವರದಿ 

ಯರಗಟ್ಟಿ 18 : ಮೊಬೈಲ್ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಉಂಟಾದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕಬುದನೂರ ಗ್ರಾಮದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಫಕೀರ​‍್ಪ ಪೆಡ್ಡೆನ್ನವರ (40) ಎಂದು ಗುರುತಿಸಲಾಗಿದೆ. 

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ ಶುಕ್ರವಾರ ಸಂಜೆ ಲಕ್ಷ್ಮೀ ದೇವಸ್ಥಾನದಲ್ಲಿ ಫಕೀರ​‍್ಪ ಮಲಗಿದ್ದ ವೇಳೆ ಸ್ನೇಹಿತ ಮಲ್ಲಿಕಾರ್ಜುನ ಪೂಜೇರೆ ಅಲ್ಲಿಗೆ ಬಂದು ತನ್ನ ಮೊಬೈಲ್‌ನ್ನು ಹಿಂತಿರುಗಿಸುವಂತೆ ಕೇಳಿದ್ದಾನೆ. ಆದರೆ ಫಕೀರ​‍್ಪ “ರಾತ್ರಿ ಕೊಡುತ್ತೇನೆ” ಎಂದು ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. 

ಆಕ್ರೋಶಗೊಂಡ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದ್ದ ಕರ​‍್ೂರ ಹಚ್ಚುವ ಕಲ್ಲನ್ನು ಎತ್ತಿ ಫಕೀರ​‍್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಫಕೀರ​‍್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುರಗೋಡ ಪೊಲೀಸ್ ಠಾಣೆಯ ಸಿಪಿಐ ಐ. ಎಂ. ಮಠಪತಿ, ಪಿಎಸ್‌ಐ ಡಬ್ಲೂ. ಎಚ್‌. ಯಾದವಾಡ  ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.