ಉಚಿತ ಬಂಜೆತನ ನಿವಾರಣಾ ಶಿಬಿರ
ಲೋಕದರ್ಶನ ವರದಿ
ಕಾಗವಾಡ 22: ಕಳೇದ ಅನೇಕ ವರ್ಷಗಳಿಂದ ಮಕ್ಕಳ ಭಾಗ್ಯ ದೊರೆಯದೆಯಿರುವ ದಂಪತಿಗಳಿಗೆ ಮಿರಜದ ಡಾ.ಸಚೀನ ಆಸ್ಪತ್ರೆಯಲ್ಲಿ ಆಧುನಿಕ ಉಪಚಾರ ವ್ಯವಸ್ಥೆ ಪ್ರಾರಂಭಿಸಿದ್ದರಿಂದ ಅನೇಕರ ಬಂಜೆತನ ಸಮಸ್ಯೆಗಳು ಇತ್ಯರ್ಥಗೊಂಡಿವೆಯೆಂದು ಖ್ಯಾತ ಬಂಜೇತನ ನಿರಾವರಣಾ ತಜ್ಞರಾದ ಡಾ.ಸಚೀನ ಸುಗಣ್ಣವರ ಮಿರಜದಲ್ಲಿ ಹೇಳಿದರು. ಮಿರಜದ ಸಚೀನ ಆಸ್ಪತ್ರೆಯಲ್ಲಿ ಭಾನುವಾರ ರಂದು ಉಚಿತ ಬಂಜೆತನ ನಿರಾವಣಾ ಶಿಬಿರ ಹಮ್ಮಿಕೊಂಡಿದ್ದರು. ಶಿಬಿರ ಉದ್ಘಾಟಿಸಿ ಡಾ.ಸಚೀನ ಸುಗಣ್ಣವರ ಉಪಚಾರಿಸಿಕೊಳ್ಳುವ ದಂಪತಿಗಳಿಗೆ ಹೇಳಿದದು.
ಆಸ್ಪತ್ರೆಯಲ್ಲಿ ಆಧುನಿಕ ಉಪಚಾರ ವ್ಯವಸ್ಥೆದೊಂದಿಗೆ ಆಯ್ಯುಆಯ್, ಆಯ್ವಿಎಫ್, ಆಯ್ಸಿಎಸ್ಆಯ್, ಆಯ್ಎಮ್ಎಸ್ಆಯ್, ಲೇಸರ್ ಹಚಿಂಗ್, ವಿಟ್ರಿಫಿಕೇಶನ ಮತ್ತು ಉನ್ನತ ತಂತ್ರಜ್ಞಾನದ ಮುಖಾಂತರ ಬಂಜೇತನಯಿರುವ ದಂಪತಿಗಳ ಮೇಲೆ ಉಪಚಾರಿಸಲಾಗುತ್ತಿದೆ. ಈ ವರೆಗೆ ಸಾವಿರಾರು ದಂಪತಿಗಳು ಹಲವಾರ ಆರೋಗ್ಯ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ಬಂದು, ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಾಗ ಅವರನ್ನು ಉಪಚಾರಿಸುವಾಗ ವಿಶ್ವಾಸಕ್ಕೆ ತೆಗೆದುಕೊಂಡು ಮಾಹಿತಿ ನೀಡಿ ಉಪಚಾರಿಸಲಾಗುತ್ತದೆ. ಈ ವರೆಗೆ ಬೇರೆ ಕಡೆ ಉಪಚಾರಿಸುವಾಗ ಲಕ್ಷಾಂತರ ರೂ. ವೆಚ್ಚುಮಾಡಿದರೂ ಅವರ ಭಾಗ್ಯ ಫಲಿಸದೆಯಿರುವದರಿಂದ ನಮ್ಮ ಬಳಿ ಉಪಚಾರಿಸಿಕೊಂಡಿದ್ದಾಗ ಅನೇಕರಿಗೆ ಬಂಜೇತನ ಎಂಬ ಹೆಸರು ಹೋಗಲಾಡಿಸುವ ಭಾಗ್ಯ ನಮ್ಮ ವೈದ್ಯ ದಂಪತಿಗಳಿಗೆ ಲಭಿಸಿದೆ ಎಂದು ಡಾ.ಸಚೀನ ಸುಗಣ್ಣವರ ಸಂತಸದಿಂದ ಹೇಳಿದರು. ಶಿಬಿರದಲ್ಲಿ ಡಾ.ನೇಹಾ ಸುಗಣ್ಣವರ, ಇನ್ನೀತರ ಶಿಬಿರಾರ್ಥಗಳು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 