ಹಾವೇರಿ:17 : ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ಆಯ್ಕೆಪೂರ್ವ ಸಂದರ್ಶನ ಆಯೋಜಿಸಲು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಅಂಗವಾಗಿ ಜಿಲ್ಲೆಯ ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳ ಮುಖ್ಯಸ್ಥರ ಸಭೆಯನ್ನು ನಡೆಸಿದ ಅವರು ಉದ್ಯೋಗ ಮೇಳದಲ್ಲಿ ತಾವು ಉದ್ಯೋಗದಾತರಾಗಿ ನೊಂದಾಯಿಸಿಕೊಳ್ಳಿ. ತಮ್ಮಲ್ಲಿ ತರಬೇತಿ ಪಡೆದು ಉದ್ಯೋಗಾವಕಾಶಗಳಿಲ್ಲದ ಅಭ್ಯಥರ್ಿಗಳಿಗೆ ಉದ್ಯೋಗ ಮೇಳದಲ್ಲಿ ನೊಂದಾಯಿಸಿಕೊಂಡು ಉದ್ಯೋಗಾವಕಾಶ ಅವಕಾಶ ಪಡೆದುಕೊಳ್ಳಲು ಸಲಹೆ ನೀಡಿದರು.
ಯಾರು ಯಾವ ಉದ್ಯೋಗ ಹೊಂದಲು ಆಸಕ್ತ ಹೊಂದಿದ್ದಾರೆ, ನೇಮಕಾತಿ ಮಾಡಿಕೊಳ್ಳುವ ಕಂಪನಿಯ ಮಾಲೀಕರು ಅಭ್ಯಥರ್ಿಗಳಿಂದ ಯಾವ ಕೌಶಲ್ಯಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ.
ಉದ್ಯೋಗದಾತರ ಈ ಕೌಶಲ್ಯಗಳಿಗೆ ಅನುಸಾರವಾಗಿ ಅಭ್ಯಥರ್ಿಗಳಿಗೆ ಪೂರ್ವಮುಖಾಮುಖಿ ಭೇಟಿ ಕಾರ್ಯಕ್ರಮವನ್ನು ಉದ್ಯೋಗಮೇಳದ ಮುನ್ನಾ ಯೋಜಿಸಲು ಸಲಹೆ ನೀಡಲಾಯಿತು. ಈ ಕುರಿತಂತೆ ಎಲ್ಲ ಖಾಸಗಿ ವೃತ್ತಿ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿಪಡೆದ ಅಭ್ಯಥರ್ಿಗಳನ್ನು ಆಹ್ವಾನಿಸಲು ಸೂಚಿಸಲಾಯಿತು.
ಜಿಲ್ಲೆಯ ಸ್ಥಳೀಯ ಟ್ರೇಡರ್ಸ್ಗಳಿಗೆ ಬೇಕಾದ ಕೌಶಲ್ಯಾಧಾರಿತ ಅಭ್ಯಥರ್ಿಗಳನ್ನು ಆಯ್ಕೆಮಾಡಲು ಅವಕಾಶ ಕಲ್ಪಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು.
ಉದ್ಯೋಗ ಮೇಳಕ್ಕೆ ಆವರಣದ ವ್ಯವಸ್ಥೆ, ಪ್ರಚಾರದ ವ್ಯವಸ್ಥೆ, ಬಿತ್ತಿ ಪತ್ರಗಳು, ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಲಭ್ಯವಿರುವ ಮೂಲ ಸೌಕರ್ಯಗಳು ಸೇರಿದಂತೆ ಸಿದ್ಧತೆಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯಥರ್ಿಗಳಿಗೆ ಮಧ್ಯಾಹ್ನದ ವೇಳೆಯಲ್ಲಿ ಲಘು ಉಪಹಾರ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಯಿತು.
ಗ್ರಾಮೀಣ ಅಭ್ಯಥರ್ಿಗಳ ನೋಂದಣಿಗಾಗಿ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಲಹೆ ನೀಡಲು ಹೋಬಳಿವಾರು ನೊಂದಣಿ ಕೌಂಟರ್ಗಳನ್ನು ಆರಂಭಿಸಲಾಗಿದೆ. ಈವರೆಗೆ ಆನ್ಲೈನ್ನಲ್ಲಿ 1600 ಉದ್ಯೋಗಾಕಾಂಕ್ಷಿಗಳು ನೊಂದಾಯಿಸಿಕೊಂಡಿದ್ದಾರೆ.
ರಾಜ್ಯದ ವಿವಿಧ ಮೂಲೆಯಿಂದ 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡಿವೆ ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.